ಮೊಟ್ಟೆ ಎಸೆದವನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಸುಳ್ಳು ಹೇಳಿದ ಕೊಡಗಿನ ಶಾಸಕ!

Prasthutha|

ಮೊಟ್ಟೆ ಎಸೆದವನು ಆರ್.ಎಸ್.ಎಸ್. ಕಾರ್ಯಕರ್ತ: ಇಲ್ಲಿದೆ ಸ್ಫೋಟಕ ಸುದ್ದಿ

- Advertisement -


ಮಡಿಕೇರಿ: ಸಿದ್ದರಾಮಯ್ಯ ಕಾರಿಗೆ ಕೊಡಗಿನ ಗುಡ್ಡೆಹೊಸೂರಿಲ್ಲಿ ಮೊಟ್ಟೆ ಎಸೆದ ಆರೋಪಿ ಸಂಪತ್ ಬಿಜೆಪಿ ಕಾರ್ಯಕರ್ತನೇ ಅಲ್ಲ, ಆತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಆರೋಪಿ ಕಾಂಗ್ರೆಸ್ ಶಾಲು ಧರಿಸಿರುವ ಫೋಟೋವನ್ನು ಬಿಡುಗಡೆ ಮಾಡಿದ್ದರು.


ರಾಮನವಮಿ ಕಾರ್ಯಕ್ರಮದಲ್ಲಿ ಆರೋಪಿ ನನ್ನ ಜೊತೆಗೆ ತೆಗೆದ ಫೋಟೋ ಇಟ್ಟು ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದಿದ್ದ ರಂಜನ್, ಕಾಂಗ್ರೆಸ್ ಕಾರ್ಯಕರ್ತರು ಕೂಡಾ ನನ್ನ ಜೊತೆಗೆ ಫೋಟೋ ತೆಗೆಯುತ್ತಾರೆ. ಸೆಲೆಬ್ರಿಟಿ, ಸಚಿವರು, ಶಾಸಕರ ಜೊತೆಗೆ ಸಾಧಾರಣವಾಗಿ ಫೋಟೋ ತೆಗೆಯುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿದ್ದರು.

- Advertisement -

ಆದರೆ ಇದೀಗ ಆರೋಪಿಯ ವಿವಿಧ ಫೋಟೋಗಳು ವೈರಲ್ ಆಗಿದೆ. ಶಾಸಕರು ರಸ್ತೆ ಉಧ್ಘಾಟಿಸುತ್ತಿರುವ ಫೋಟೋದಲ್ಲಿ ಆರೋಪಿ ರಂಜನ್ ಜೊತೆಗಿದ್ದಾನೆ. ಮತ್ತೊಂದು ಫೋಟೋದಲ್ಲಿ ಆರ್.ಎಸ್.ಎಸ್ ಶಾಖೆಯಲ್ಲಿ ಶಾಸಕರ ಜೊತೆಗೆ ಆರೋಪಿ ಇರುವ ಫೋಟೋ ವೈರಲ್ ಆಗಿದೆ. ಇದಲ್ಲದೆ ಸಂಘಪರಿವಾರ ಕಾರ್ಯಕರ್ತರ ಜೊತೆಗಿನ ಹಲವು ಫೋಟೋಗಳು ವೈರಲ್ ಆಗಿದೆ. ಆದುದರಿಂದ ಅಪ್ಪಚ್ಚು ರಂಜನ್ ಹೇಳಿಕೆ ಸುಳ್ಳಾಗಿದೆ.

Join Whatsapp
Exit mobile version