Home ಟಾಪ್ ಸುದ್ದಿಗಳು ಕೊಡಗು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವ್ಯಕ್ತಿ ಶಾಸಕ ಅಪ್ಪಚ್ಚು ರಂಜನ್ ಜೊತಗಿರುವ ಫೋಟೋ ವೈರಲ್

ಕೊಡಗು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವ್ಯಕ್ತಿ ಶಾಸಕ ಅಪ್ಪಚ್ಚು ರಂಜನ್ ಜೊತಗಿರುವ ಫೋಟೋ ವೈರಲ್

ಮಡಿಕೇರಿ: ಕುಶಾಲನಗರ ಸಮೀಪ ಗುಡ್ಡೆಹೊಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ದಾಳಿ ಮಾಡಿರುವ ವ್ಯಕ್ತಿ ಅಪ್ಪಚ್ಚು ರಂಜನ್ ಜೊತೆಗಿರುವ ಫೋಟೋ ವೈರಲ್ ಆಗಿದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ಆರೋಪಿ ವ್ಯಕ್ತಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ರಾಮನವಮಿ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಧರಿಸಿದ್ದ ವ್ಯಕ್ತಿ ನನ್ನ ಜೊತೆಗೆ ಫೋಟೋ ತೆಗೆದಿದ್ದಾರಷ್ಟೆ ಎಂದು ಹೇಳಿದರು.

ಸೆಲೆಬ್ರಿಟಿ, ಸಚಿವರು, ಶಾಸಕರ ಜೊತೆಗೆ ಜನರು ಫೋಟೋ ತೆಗೆಯುತ್ತಾರೆ. ಆರೋಪಿ ವ್ಯಕ್ತಿ ಬಿಜೆಪಿ ಕಾರ್ಯಕರ್ತನೇ ಅಲ್ಲ ಎಂದ ರಂಜನ್, ಆರೋಪಿ ವ್ಯಕ್ತಿ ಕಾಂಗ್ರೆಸ್ ಶಾಲು ಹಾಕಿರುವ ಫೋಟೋ ಬಿಡುಗಡೆ ಮಾಡಿದರು. ಈ ಕುರಿತು ಪೊಲೀಸರು ತನಿಖೆ ನಡೆಸಲಿ ಎಂದರು.

Join Whatsapp
Exit mobile version