Home ಟಾಪ್ ಸುದ್ದಿಗಳು ಕೇರಳ | ಸಿಪಿಐ(ಎಂ) ಮುಖಂಡನ ಬರ್ಬರ ಹತ್ಯೆ !

ಕೇರಳ | ಸಿಪಿಐ(ಎಂ) ಮುಖಂಡನ ಬರ್ಬರ ಹತ್ಯೆ !

► ಆರೆಸ್ಸೆಸ್ ಕಾರ್ಯಕರ್ತರ ಕೈವಾಡ ಶಂಕೆ

ಕೇರಳ: ಕೇರಳದಲ್ಲಿ ರಾಜಕೀಯ ಪ್ರೇರಿತ ಹತ್ಯೆಗಳು ಮುಂದುವರೆದಿದ್ದು ಸಿಪಿಐ(ಎಂ) ಮುಖಂಡ 34 ವರ್ಷದ ಸಂದೀಪ್ ಕುಮಾರ್ ಎಂಬವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಸಿಪಿಐಎಂ ಪೆರಿಂಗಾರ ಎಲ್ ಸಿ ಕಾರ್ಯದರ್ಶಿಯಾಗಿದ್ದ ಸಂದೀಪ್ ರನ್ನು ದುಷ್ಕರ್ಮಿಗಳು 11 ಬಾರಿ ಇರಿದು ಕೊಂದಿದ್ದಾರೆ. ಗುರುವಾರ ರಾತ್ರಿ 8ರ ವೇಳೆ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.

ಗಂಭೀರ ಗಾಯಗೊಂಡಿದ್ದ ಸಂದೀಪ್ , ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಸಂದೀಪ್ ಕೊಲೆ ಪ್ರಕರಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆಂದು ಸಿಪಿಐ(ಎಂ) ನೇರವಾಗಿ ಆರೋಪಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಿಪಿಐ ಎಂ ರಾಜ್ಯ ಕಾರ್ಯದರ್ಶಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Join Whatsapp
Exit mobile version