Home ಟಾಪ್ ಸುದ್ದಿಗಳು ಪೆರಿಯ ಅವಳಿ ಕೊಲೆ ಪ್ರಕರಣ | ಸಿಪಿಎಂ ಮಾಜಿ ಶಾಸಕ ಸೇರಿ ನಾಲ್ವರ ವಿರುದ್ಧ ಪ್ರಕರಣ...

ಪೆರಿಯ ಅವಳಿ ಕೊಲೆ ಪ್ರಕರಣ | ಸಿಪಿಎಂ ಮಾಜಿ ಶಾಸಕ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಕೇರಳ: ದೇಶಾದ್ಯಂತ ಸುದ್ದಿಯಾಗಿದ್ದ ಪೆರಿಯ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಮಾಜಿ ಶಾಸಕ ಕೆ. ವಿ. ಕುಞ ರಾಮನ್ ಸೇರಿದಂತೆ ನಾಲ್ವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದುಮ ಮಾಜಿ ಶಾಸಕ ಕೆ. ವಿ. ಕುಞ ರಾಮನ್, ಸಿಪಿಎಂ ಪಾಕಂ ಸಮಿತಿ ಕಾರ್ಯದರ್ಶಿ ರಾಘವನ್ ವೆಳ್ಳತ್ತೋಳಿ , ಗೋಪಾಲ್ , ಸಂದೀಪ್ ವೆಳ್ಳತ್ತೋಳಿ , ಭಾಸ್ಕರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಬುಧವಾರ ಐವರು ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಬಳಿಕ ಸಿಬಿಐ ಹತ್ತು ಮಂದಿಯನ್ನು ಬಂಧಿಸಿದ್ದು , ಈ ಹಿಂದೆ ಕ್ರೈಂ ಬ್ರಾಂಚ್ ೧೪ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಒಟ್ಟು ಈ ಅವಳಿ ಕೊಲೆ ಘಟನೆಯಲ್ಲಿ 24 ಮಂದಿ ಆರೋಪಿಗಳ ವಿರುದ್ಧ ಪ್ರಕರನ ದಾಖಲಾಗಿದೆ.

Join Whatsapp
Exit mobile version