Home ಕರಾವಳಿ ಕಾಟಿಪಳ್ಳ | ರಕ್ಷಾಬಂಧನ ತೆಗೆಸಿದ ಆರೋಪ, ಶಾಲೆಯಲ್ಲಿ ಬಂದು ಸಂಘಪರಿವಾರ ಕಾರ್ಯಕರ್ತರ ದಾಂಧಲೆ

ಕಾಟಿಪಳ್ಳ | ರಕ್ಷಾಬಂಧನ ತೆಗೆಸಿದ ಆರೋಪ, ಶಾಲೆಯಲ್ಲಿ ಬಂದು ಸಂಘಪರಿವಾರ ಕಾರ್ಯಕರ್ತರ ದಾಂಧಲೆ

ಸುರತ್ಕಲ್: ವಿದ್ಯಾರ್ಥಿಗಳ ಕೈಯಲ್ಲಿದ್ದ ರಕ್ಷಾಬಂಧನವನ್ನು ತೆಗೆಸಿದ್ದಾರೆಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರು ಹೊರವಲಯದಲ್ಲಿರುವ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆ ಖಾಸಗಿ ಶಾಲೆಯಲ್ಲಿ ನಡೆದಿದೆ.

ದಾಂಧಲೆ ಕಾರಣದಿಂದಾಗಿ ಶಾಲೆಗೆ ಸುರತ್ಕಲ್ ಪೊಲೀಸರು ಮಧ್ಯಪ್ರವೇಶಿಸಿದ್ದು, ಶಾಲಾ ಆಡಳಿತ ಮಂಡಳಿ ಘಟನೆಯ ಕುರಿತಂತೆ ಕ್ಷಮೆ ಕೇಳಿದ್ದರಿಂದ ಪ್ರಕರಣ ಸುಖಾಂತ್ಯವಾಗಿದೆ ಎಂದು ತಿಳಿದುಬಂದಿದೆ.

ಬಳಿಕ ಮಾತನಾಡಿದ ಶಾಲೆಯ ಪ್ರಾಂಶುಪಾಲರು ಒತ್ತಡದಿಂದ ರಾಕಿ ಕಟ್ಟುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದಕ್ಕೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

Join Whatsapp
Exit mobile version