ಹಳಿ ತಪ್ಪಿದ ಕಣ್ಣೂರು–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು | ಪ್ರಯಾಣಿಕರು ಪಾರು

Prasthutha|

ಬೆಂಗಳೂರು: ಕಣ್ಣೂರು–ಯಶವಂತಪುರ (ಬೆಂಗಳೂರು) ನಡುವೆ ಚಲಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು ಶುಕ್ರವಾರ ಮುಂಜಾನೆ ಹಳಿ ತಪ್ಪಿದ್ದು, ಪ್ರಯಾಣಿಕರು ಪಾರಾಗಿದ್ದಾರೆ.

- Advertisement -

ಶುಕ್ರವಾರ ಮುಂಜಾನೆ 3.50ರ ವೇಳೆ ಸಂಚರಿಸುತ್ತಿರುವ ರೈಲಿನ ಮೇಲೆ ತೊಪ್ಪೂರು–ಸಿವಾಡಿ ಮಧ್ಯೆ ಹಳಿಗೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲು ಹಳಿ ತಪ್ಪಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ,ರೈಲಿನ ಎಸಿ ಬೋಗಿಗಳು ಹಾನಿಗೊಳಗಾಗಿದೆ. ಎಂದು ರೈಲ್ವೆ ಹೇಳಿಕೆ ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

Join Whatsapp
Exit mobile version