Home ಟಾಪ್ ಸುದ್ದಿಗಳು ಮನೆಯಲ್ಲಿ ನಮಾಝ್ ಮಾಡಿದವರ ಮೇಲೆ ಪ್ರಕರಣ ದಾಖಲಿಸಿರುವುದು ಅನ್ಯಾಯ: ಅಸಾದುದ್ದೀನ್ ಉವೈಸಿ ಆಕ್ರೋಶ

ಮನೆಯಲ್ಲಿ ನಮಾಝ್ ಮಾಡಿದವರ ಮೇಲೆ ಪ್ರಕರಣ ದಾಖಲಿಸಿರುವುದು ಅನ್ಯಾಯ: ಅಸಾದುದ್ದೀನ್ ಉವೈಸಿ ಆಕ್ರೋಶ

ಹೈದರಾಬಾದ್: ಮನೆಯೊಂದರಲ್ಲಿ ಸಾಮೂಹಿಕ  ನಮಾಜ್ ಮಾಡಿದ ಆರೋಪದ ಮೇಲೆ 26 ಜನರ ವಿರುದ್ಧ ಪ್ರಕರಣ ದಾಖಲಿಸಿರುವ ಉತ್ತರ ಪ್ರದೇಶ ಪೊಲೀಸರ ಈ ಕ್ರಮವನ್ನು ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಉವೈಸಿ ಖಂಡಿಸಿದ್ದಾರೆ.

ಅಸಾದುದ್ದೀನ್ ಉವೈಸಿ, “ಎಲ್ಲಿ ಬೇಕಾದರೂ ‘ನಮಾಜ್’ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮನೆಯಲ್ಲಿ ‘ನಮಾಜ್’ ಮಾಡಲು ಏಕೆ ಆಕ್ಷೇಪಣೆ ಇದೆ? ಇದು ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗಸ್ಟ್ 24 ರಂದು, ಉತ್ತರ ಪ್ರದೇಶದ ಮೊರಾದಾಬಾದ್ ನ  ಛಜ್ಲೆಟ್ ಪಿಎಸ್ ವ್ಯಾಪ್ತಿಯಲ್ಲಿ ನಮಾಜ್ ಮಾಡಲು ಅಪಾರ ಸಂಖ್ಯೆಯ ಜನರು ಸೇರಿದ್ದರು. ಪೊಲೀಸರ ಪ್ರಕಾರ, ಅಲ್ಲಿ ಯಾವುದೇ ಮಸೀದಿ ಇರಲಿಲ್ಲ, ಕೇವಲ ಎರಡು ಮನೆಗಳು ಮಾತ್ರ ಇದ್ದವು. ಇನ್ನು ಮುಂದೆ ಮನೆಯಲ್ಲಿಯೂ ನಮಾಜ್ ಮಾಡಲು ಸಾಧ್ಯವಿಲ್ಲವೇ? ಎಂದು ಉವೈಸಿ ಪ್ರಶ್ನಿಸಿದರು.

ನಮಾಝ್ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಉವೈಸಿ, ಭಾರತದ ಮುಸ್ಲಿಮರು ಇನ್ನು ಮುಂದೆ ಮನೆಯಲ್ಲಿಯೂ ನಮಾಜ್ ಮಾಡಲು ಸಾಧ್ಯವಿಲ್ಲವೇ? ನಾನು ಈಗ ಪ್ರಾರ್ಥನೆ ಸಲ್ಲಿಸಲು ಸರ್ಕಾರ / ಪೊಲೀಸರಿಂದ ಅನುಮತಿ ಪಡೆಯಬೇಕೇ? @narendramodi ಇದಕ್ಕೆ ಉತ್ತರಿಸಬೇಕು. ಎಷ್ಟರ ವರೆಗೆ ದೇಶದ  ಮುಸ್ಲಿಮರನ್ನು ಎರಡನೇ ದರ್ಜೆಯ ನಗರವಾಸಿಗಳೆಂದು ಪರಿಗಣಿಸಲಾಗುತ್ತದೆ” ಎಂದು ಕೇಳಿದ್ದಾರೆ.

Join Whatsapp
Exit mobile version