Home ಟಾಪ್ ಸುದ್ದಿಗಳು ಈಶ್ವರಪ್ಪ ರಾಜೀನಾಮೆ ಹಿಂದೆ ಬಿಜೆಪಿ ‘ಯುವ ನಾಯಕ’ನ ಕೈವಾಡ; ಯತ್ನಾಳ್ ಹೊಸ ಬಾಂಬ್

ಈಶ್ವರಪ್ಪ ರಾಜೀನಾಮೆ ಹಿಂದೆ ಬಿಜೆಪಿ ‘ಯುವ ನಾಯಕ’ನ ಕೈವಾಡ; ಯತ್ನಾಳ್ ಹೊಸ ಬಾಂಬ್

ವಿಜಯಪುರ: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈಶ್ವರಪ್ಪ ಕೇಸ್ ಹಿಂದೆ ಬಿಜೆಪಿ ಯುವನಾಯಕನೊಬ್ಬ ಇದ್ದಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಮಹಾನಾಯಕನ ಜೊತೆ ಸೇರಿ ಬಿಜೆಪಿ ಯುವನಾಯಕ ಕುತಂತ್ರ ನಡೆಸುತ್ತಿದ್ದಾರೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ರಮೇಶ ಜಾರಕಿಹೊಳಿ ನಿನ್ನೆ ನೀಡಿದ ಹೇಳಿಕೆಗೆ ಧ್ವನಿಗೂಡಿಸಿ, ರಮೇಶ ಜಾರಕಿಹೊಳಿ ಹೇಳಿದ್ದು ಸತ್ಯ ಇದೆ, ಬಿಜೆಪಿಯಲ್ಲೂ ಒಂದು CD ಟೀಮ್ ಇದೆ. ಕಾಂಗ್ರೆಸ್ ನಲ್ಲೂ ಒಂದು CD ಟೀಮ್ ಇದೆ.

ಮಹಾಕಳ್ಳ ಮತ್ತು ಬಿಜೆಪಿ ಕಳ್ಳ ಸೇರಿ ಈ ಕೆಲಸ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಎರಡು CD ಕಾರ್ಖಾನೆಗಳು ಇವೆ. ಬಿಜೆಪಿಯಲ್ಲಿ  ಮೂರ್ಖ ಯುವನಾಯಕ ಇದ್ದಾನೆ, ಅವರಿಬ್ಬರು ಸೇರಿ ಇದನ್ನು ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

Join Whatsapp
Exit mobile version