Home ಟಾಪ್ ಸುದ್ದಿಗಳು ಸಿದ್ದರಾಮಯ್ಯನವರ ರಾಜಕಾರಣ ನನಗೆ ಬಹಳ ಚೆನ್ನಾಗಿ ಗೊತ್ತಿದೆ: ಬಸವರಾಜ ಹೊರಟ್ಟಿ

ಸಿದ್ದರಾಮಯ್ಯನವರ ರಾಜಕಾರಣ ನನಗೆ ಬಹಳ ಚೆನ್ನಾಗಿ ಗೊತ್ತಿದೆ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯನವರ ರಾಜಕಾರಣ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ಅವರು ನೂರಕ್ಕೆ 99 ರಷ್ಟು ವರುಣಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಜನಪ್ರಿಯರಾದರೆ ಹೀಗೆ ಆಗುತ್ತದೆ. ಸೋಲು ಗೆಲುವು ಮುಖ್ಯ ಅಲ್ಲ, ಒಂದು ಕ್ಷೇತ್ರ ಆಯ್ಕೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಹೀಗಾಗಿ ಅವರು ವರುಣಾದಲ್ಲಿ ನಿಲ್ಲಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಏನಾದರೂ ಮಾಡಿ ಸಿದ್ದರಾಮಯ್ಯ ಹೋಗಲಿ‌ ಎಂದು ಡಿ.ಕೆ.ಶಿವಕುಮಾರ್, ಡಿ.ಕೆ.ಶಿವಕುಮಾರ್ ಹೋಗಲಿ ಎಂದು ಸಿದ್ದರಾಮಯ್ಯ, ಪ್ರಯತ್ನಿಸುತ್ತಿದ್ದಾರೆ. ಆ ಕಾರಣಕ್ಕೆ ಹೀಗೆಲ್ಲಾ ಆಗ್ತಿದೆ ಎಂದು ತಮ್ಮದೇ ಅಭಿಪ್ರಾಯ ಹಂಚಿಕೊಂಡರು.

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರ ಪುಂಡಾಟಿಕೆ ಹೆಚ್ಚಾಗಿದ್ದು, ಶಾಸಕರು ಸಂಸದರು ವೋಟ್ ಗಾಗಿ ಸುಮ್ಮನಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿರುವ ಎಂಇಎಸ್ ಸಂಘಟನೆ ಕಾರ್ಯಕರ್ತರನ್ನು ಒದ್ದು ಒಳಗೆ ಹಾಕಬೇಕು. ಎಂಇಎಸ್ ನವರು ಇಲ್ಲಿಯ ಅನ್ನ ಉಂಡು ದ್ರೋಹ ಬಗೆಯುತ್ತಿದ್ದಾರೆ. ಪುಂಡಾಟಿಕೆ ಮಾಡಿದರೆ ನಮ್ಮವರು‌ ಸುಮ್ಮನಿರ್ತಾರಾ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Join Whatsapp
Exit mobile version