Home ಟಾಪ್ ಸುದ್ದಿಗಳು ನನಗೆ ಮತ ಹಾಕದ ಹಿಂದೂಗಳಲ್ಲಿ ಮುಸ್ಲಿಮ್ ರಕ್ತ ಹರಿಯುತ್ತಿದೆ । ಮತ್ತೆ ನಾಲಗೆ ಹರಿಯಬಿಟ್ಟ ಬಿಜೆಪಿ...

ನನಗೆ ಮತ ಹಾಕದ ಹಿಂದೂಗಳಲ್ಲಿ ಮುಸ್ಲಿಮ್ ರಕ್ತ ಹರಿಯುತ್ತಿದೆ । ಮತ್ತೆ ನಾಲಗೆ ಹರಿಯಬಿಟ್ಟ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್

ಲಕ್ನೋ: ನನಗೆ ಮತ ಹಾಕದ ಹಿಂದೂಗಳ ರಕ್ತನಾಳಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿದೆ ಎಂದು ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ತನ್ನ ನಾಲಗೆಯನ್ನು ಮತ್ತೊಮ್ಮೆ ಹರಿಯ ಬಿಟ್ಟಿದ್ದಾನೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಸ್ಲಿಮರು ನನಗೆ ಹಾಕುತ್ತಾರೆಯೇ ಎಂದು ತನ್ನ ಭಾಷಣ ಆರಂಬಿಸಿದ ಶಾಸಕ ರಾಘವೇಂದ್ರ, ಈ ಗ್ರಾಮದಲ್ಲಿರುವ ಹಿಂದೂಗಳು ಇನ್ನೊಂದು ಪಕ್ಷವನ್ನು ಬೆಂಬಲಿಸಿದರೆ ಅವರ ರಕ್ತನಾಳಗಳಲ್ಲಿ ಮುಸ್ಲಿಮರ ರಕ್ತ ಹರಿದಾಡುತ್ತಿದೆ ಎಂದರ್ಥ. ಈ ರೀತಿ ಮಾಡುವವರು ದ್ರೋಹಿಗಳು ಮತ್ತು ಜೈಚಂದ್ರನ ಅಕ್ರಮ ಸಂತಾನ. ಆತ ಹಿಂದೂ ತಂದೆಗೆ ಹುಟ್ಟಲು ಸಾಧ್ಯವಿಲ್ಲ. ಇಷ್ಟೊಂದು ಕಿರುಕುಳದ ಬಳಿಕವೂ ಹಿಂದೂಗಳು ಇನ್ನೊಂದು ಕಡೆ ಹೋದರೆ, ಅವರು ಸಾರ್ವಜನಿಕವಾಗಿ ಮುಖ ತೋರಿಸಲು ಅನರ್ಹರು ಎಂದು ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಮಧ್ಯೆ ಶಾಸಕ ರಾಘವೇಂದ್ರ ನೆರೆದವರಿಗೆ ಎಚ್ಚರಿಕೆ ನೀಡಿದ್ದು, ಇದನ್ನು ಮೀರಿ ಯಾರದರೂ ಮತ ನೀಡದಿದ್ದರೆ ನಾನು ಯಾರೆಂದು ಎಲ್ಲರಿಗೂ ತಿಳಿಸುತ್ತೇನೆ. ನನಗೆ ವೈಯಕ್ತಿಕ ನಿಂದನೆ ಮತ್ತು ದ್ರೋಹವೆಸಗಿದರೆ ಸಹಿಸುತ್ತೇನೆ. ಆದರೆ ಹಿಂದೂ ಸಮಾಜಕ್ಕೆ ಅಪಮಾನಗೈದರೆ ನಾಶಗೊಳಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಹಿಂದೂ ಯುವ ವಾಹಿನಿಯ ಉಸ್ತುವಾರಿಯೂ ಆಗಿರುವ ಸಿಂಗ್, ಮಾರ್ಚ್ 3 ರಂದು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದಲ್ಲಿ ಡೊಮರಿಯಾಗಂಜ್ ಕ್ಷೇತ್ರದಿಂದ ಮರುಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

Join Whatsapp
Exit mobile version