ಗುಜರಾತ್​ ಟೈಟಾನ್ಸ್​ ವಿರುದ್ಧ RCB ಸೋಲಿಗೆ ಇವೇ ಐದು ಪ್ರಮುಖ ಕಾರಣಗಳು…

- Advertisement -

ಬುಧವಾರ ನಡೆದ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೋಲನ್ನು ಕಂಡಿದೆ. ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್ ​ಸಿಬಿ ತಂಡ ಬ್ಯಾಟಿಂಗ್ ​ನಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

- Advertisement -

ಟಾಸ್​ ಸೋತು ಮೊದಲು ಬ್ಯಾಟಿಂಗ್ ​ಗೆ ಬಂದ ಬೆಂಗಳೂರು ಪಡೆ 8 ವಿಕೆಟ್​ ನಷ್ಟಕ್ಕೆ 169 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ಆರ್​ ಸಿಬಿ ಟಾಪ್​ ನಾಲ್ವರು ಬ್ಯಾಟರ್​ ಗಳು ಗುಜರಾತ್​ ವಿರುದ್ಧ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟರ್​ ಫಿಲ್​ ಸಾಲ್ಟ್​ (14), ವಿರಾಟ್​ ಕೊಹ್ಲಿ (7), ಪಡಿಕ್ಕಲ್​ (4), ರಜತ್​ ಪಟಿದಾರ್​ (12) ಅಲ್ಪಮೊತ್ತಕ್ಕೆ ತಮ್ಮ ಇನ್ನಿಂಗ್ಸ್​ ಮುಗಿಸಿದರು. ಟಾಪ್​ ಆರ್ಡರ್​ ಫ್ಲಾಪ್​ ಆದರೂ ತಂಡಕ್ಕೆ ಮಧ್ಯಮ ಕ್ರಮಾಂಕ ಆಸರೆ ಆಯ್ತು. ಲಿವಿಂಗ್​ಸ್ಟೋನ್​ (54) ಅರ್ಧಶತಕ ಸಿಡಿಸಿದರೆ, ಜಿತೇಶ್​ ಶರ್ಮಾ (33), ಟಿಮ್​ ಡೇವಿಡ್​ (32) ಕೊನೆಯಲ್ಲಿ ರನ್​ ಕಲೆಹಾಕಿ ತಂಡದ ಸ್ಕೋರ್​ 160ರ ಗಡಿ ದಾಟಿಸುವಲ್ಲಿ ಯಶಸ್ವಿ ಆದರು.

ಆರ್ ​ಸಿಬಿ ಸೋಲಿಗೆ ಪ್ರಮುಖ ಕಾರಣಗಳು

- Advertisement -

ಕಳೆದ 7 ಆವೃತ್ತಿಗಳಲ್ಲಿ ಆರ್​ ಸಿಬಿ ತಂಡದ ಭಾಗವಾಗಿದ್ದ ಸಿರಾಜ್​ ಈ ಬಾರಿ ಗುಜರಾತ್​ ಪರ ಆಡುತ್ತಿದ್ದಾರೆ. ಅಲ್ಲದೆ ನಿನ್ನೆಯ ಪಂದ್ಯದಲ್ಲೂ ಭರ್ಜರಿ ಬೌಲಿಂಗ್​ ಮಾಡಿದ ಸಿರಾಜ್​ ಪ್ರಮುಖ ಮೂರು ವಿಕೆಟ್​ ಪಡೆದು ಆರ್ ​ಸಿಬಿ ಬ್ಯಾಟಿಂಗ್​ ಲೈನ್​ಅಪ್​ ಅನ್ನು ಕೆಡವಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್​ ಮೂಲಕ ರನ್​ ಕೆಲೆಹಾಕುತ್ತಿದ್ದ ಲಿವಿಂಗ್ ​ಸ್ಟೋನ್​ ವಿಕೆಟ್​ ಉರುಳಿಸಿದ್ದು ಆರ್​ಸಿಬಿ ಹಿನ್ನಡೆಗೆ ಕಾರಣವಾಯಿತು.

ಈ ಪಂದ್ಯದಲ್ಲಿ ಆರ್ ​ಸಿಬಿ ಸೋಲಿಗೆ ಟಾಸ್​ ಕೂಡ ಕಾರಣವಾಗಿದೆ. ಚಿನ್ನಸ್ವಾಮಿಯಲ್ಲಿ ನಡೆದ ಈ ಋತುವಿನ ಮೊದಲ ಪಂದ್ಯವಾಗಿದ್ದರಿಂದ ಪಿಚ್​ ಬಗ್ಗೆ ಅರಿಯಲು ಎರಡೂ ತಂಡಗಳಿಗೆ ಅನಿವಾರ್ಯವಾಗಿತ್ತು. ಆದರೆ ಆರ್​ ಸಿಬಿಗೆ ಈ ಅವಕಾಶ ಸಿಗಲಿಲ್ಲ.

ಈ ಪಂದ್ಯದಲ್ಲಿ ಆರ್ ​ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್​ ಪ್ಲೇನಲ್ಲೆ ಫಿಲ್​ ಸಾಲ್ಟ್​, ವಿರಾಟ್​ ಕೊಹ್ಲಿ, ಪಡಿಕ್ಕಲ್​ ವಿಕೆಟ್​ ಕಳೆದುಕೊಂಡಿತು. ಒಟ್ಟಾರೆ 42 ರನ್​ಗಳಿಗೆ 4 ವಿಕೆಟ್​ ಕೈಚೆಲ್ಲಿದ್ದು ಆರ್ ​ಸಿಬಿ ಸ್ಕೋರ್​ ಕಾರ್ಡ್​ ಮೇಲೆ ಪ್ರಭಾವ ಬೀರಿತು.

ಗುಜರಾತ್​ ತಂಡದ ಗೆಲುವಿನ ರೂವಾರಿ ಆದ ಜಾಸ್​ ಬಟ್ಲರ್​ ವಿಕೆಟ್​ ಪಡೆಯುವಲ್ಲಿ ಆರ್​ಸಿಬಿ ಬೌಲರ್​ ಗಳು ವಿಫಲವಾದರು. ಇದರ ಪರಿಣಾಮ ಬಟ್ಲರ್​ 39 ಎಸೆತಗಳಲ್ಲಿ 73 ರನ್​ ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿ ಆದರು.

- Advertisement -


Must Read

Related Articles