ಶಿವಮೊಗ್ಗ | ಬಜರಂಗದಳ ಮುಖಂಡ ಹರ್ಷನ ಹತ್ಯೆ; ಐವರು ಆರೋಪಿಗಳು ಎನ್‌ಐಎ ಕಸ್ಟಡಿಗೆ

Prasthutha|

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತನ ಹತ್ಯೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ವಿಶೇಷ ನ್ಯಾಯಾಲಯವು, ಎನ್.ಐ.ಎ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ.

- Advertisement -

ಎನ್.ಐ.ಐ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಿ ಪ್ರಮೋದ್ ಅವರು ಆರೋಪಿಗಳನ್ನು ಎನ್.ಐ.ಎ ಕಸ್ಟಡಿಗೆ ಆದೇಶ ನೀಡಿದ್ದಾರೆ.

ಈ ಆದೇಶದನ್ವಯ ಪ್ರಕರಣದ ಆರೋಪಿಗಳಾದ ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಅಬ್ದುಲ್ ಅಫ್ವಾನ್, ವಾದಿ ಎ ಹುದಾ ನಿವಾಸಿ ಅಬ್ದುಲ್ ಖಾದರ್ ಜಿಲಾನಿ, ಇಲ್ಯಾಸ್ ನಗರದ ನಿವಾಸಿ ಫರಾಝ್ ಪಾಷಾ, ಜೆಪಿ ನಗರದ ಸೈಯ್ಯದ್ ನದೀಮ್ ಮತ್ತು ವಾದಿ ಎ ಹುದಾ ನಿವಾಸಿ ಜಾಫರ್ ಸಾದಿಕ್ ಎಂಬವರನ್ನು ಮೇ 9 ರವರೆಗೆ ಎನ್.ಐ.ಎ ಕಸ್ಟಡಿಗೆ ಒಪ್ಪಿಸುವಂತೆ ಆದೇಶ ನೀಡಲಾಗಿದೆ.

- Advertisement -

ಫೆಬ್ರವರಿ 20 2022 ರ ರಾತ್ರಿ ಶಿವಮೊಗ್ಗದಲ್ಲಿ ಬಜರಂಗದಳದ ಮುಖಂಡ ಹರ್ಷ ಎಂಬಾತನನ್ನು ಕಡಿದು ಹತ್ಯೆ ನಡೆಸಲಾಗಿತ್ತು. ಈ ಪ್ರಕರಣವನ್ನು ಸರ್ಕಾರ ಎನ್.ಐ.ಎ ತನಿಖೆ ವಹಿಸಿದ್ದು, ಇದುವರೆಗೂ ಹತ್ತು ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

Join Whatsapp
Exit mobile version