Home ಟಾಪ್ ಸುದ್ದಿಗಳು ರೈತರ ಹೋರಾಟ | ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ : ಹರ್ ಸಿಮ್ರತ್ ಕೌರ್...

ರೈತರ ಹೋರಾಟ | ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ : ಹರ್ ಸಿಮ್ರತ್ ಕೌರ್ ಆರೋಪ

ನವದೆಹಲಿ : ನೂತನ ಕೃಷಿ ಕಾನುನುಗಳ ವಿರುದ್ಧ ರೈತರ ಪ್ರತಿಭಟನೆಗಳನ್ನು ಬೆಂಬಲಿಸುವಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಆ ಪಕ್ಷದ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಶಿರೋಮಣಿ ಅಕಾಲಿ ದಳದ ಮಾಜಿ ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಹೇಳಿದ್ದಾರೆ. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿ ಈ ಮಾತುಗಳನ್ನಾಡಿದ್ದಾರೆ.

“ಮೊಸಳೆ ಕಣ್ಣೀರಿಡುವ ಮೊದಲು ಪಂಜಾಬಿಗಳನ್ನು ಖಲಿಸ್ತಾನಿಗಳು ಎಂದು ಕರೆದಿರುವುದೇಕೆ? ನಿಮ್ಮ ಅಜ್ಜಿ ಪಂಜಾಬಿಗಳ ಬಗ್ಗೆ ಇದೇ ಪದ ಬಳಸಿದ್ದೇಕೆ? ನೀವು ಅವರನ್ನು ಮಾದಕ ವ್ಯಸನಿಗಳೆಂದು ಏಕೆ ಕರೆದಿದ್ದೀರಿ? ಈ ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದರೆ ಮಾತ್ರ ನೀವು ಪಂಜಾಬ್ ರೈತರೊಂದಿಗೆ ಮಾತನಾಡಬಹುದು” ಎಂದು ಕೌರ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್ ನಲ್ಲಿ ರೈತರು ಧರಣಿ ಮಾಡುತ್ತಿದ್ದಾಗ, ಸಂಸತ್ತಿನಲ್ಲಿ ಮಸೂದೆಗಳು ಅಂಗೀಕಾರವಾದಾಗ ನೀವು ಎಲ್ಲಿದ್ದೀರಿ? ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ ನ 40 ಸಂಸದರು ಗೈರು ಹಾಜರಾಗಿದ್ದರು. ನಿಮ್ಮ ಪಂಜಾಬ್ ಮುಖ್ಯಮಂತ್ರಿ ಈಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದೊಂದಿಗೆ ಕೈಜೋಡಿಸಿದ್ದಾರೆ ಎಂದು ಕೌರ್ ಆರೋಪಿಸಿದ್ದಾರೆ.

Join Whatsapp
Exit mobile version