Home ಟಾಪ್ ಸುದ್ದಿಗಳು ‘ಹರ್ ಘರ್ ತಿರಂಗ’ ಪರಿಣಾಮ; ಚರಂಡಿಯಲ್ಲಿ ದೊರಕಿದ ರಾಷ್ಟ್ರ ಧ್ವಜ

‘ಹರ್ ಘರ್ ತಿರಂಗ’ ಪರಿಣಾಮ; ಚರಂಡಿಯಲ್ಲಿ ದೊರಕಿದ ರಾಷ್ಟ್ರ ಧ್ವಜ

ಚಿಕ್ಕಮಗಳೂರು: ರಾಷ್ಟ್ರ ಧ್ವಜವೊಂದು ಚರಂಡಿಯಲ್ಲಿ ದೊರೆತ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ನಡೆದಿದೆ.


ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಖುಷಿಯಲ್ಲಿದೆ. ದೃಷ್ಟಿ ಹಾಯಿಸುವಲ್ಲೆಲ್ಲಾ ತಿರಂಗಾಗಳೇ ರಾರಾಜಿಸುತ್ತಿವೆ. ಆದರೆ ವಿಕೃತ ಮನಸ್ಸಿನ ಕೆಲ ಕಿಡಿಗೇಡಿಗಳು ತ್ರಿವರ್ಣ ಧ್ವಜವನ್ನು ಚರಂಡಿಗೆ ಎಸೆದು ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.


ಬಣಕಲ್ ಪಟ್ಟಣದ ಚರಂಡಿಯಲ್ಲಿ ತ್ರಿವರ್ಣಧ್ವಜ ದೊರೆತಿದ್ದು, ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಥವಾ ಯಾವುದೋ ಕಟ್ಟಡಕ್ಕೆ ಕಟ್ಟಿದ ಧ್ವಜ ಮಳೆಗೆ ಬಿದ್ದಿರುವ ಸಾಧ್ಯತೆಯನ್ನೂ ಊಹಿಸಬಹುದಾಗಿದೆ.


ಸಂಪೂರ್ಣವಾಗಿ ಕೆಸರಿನಿಂದ ತುಂಬಿದ್ದ ತ್ರಿವರ್ಣ ಧ್ವಜವನ್ನು ಧರ್ಮಸ್ಥಳ ಕ್ಷೇತ್ರ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೂಡಲೇ ಚರಂಡಿಯಿಂದ ಧ್ವಜವನ್ನು ಮೇಲಕ್ಕೆತ್ತಿದ್ದಾರೆ.


ಧ್ವಜವನ್ನು ಉಪಯೋಗಿಸುವ ನಿಯಮಾವಳಿಗಳನ್ನು ಸರ್ಕಾರ ಜನರಿಗೆ ತಲುಪಿಸಿದ್ದರೂ ಕೂಡ ಈ ರೀತಿಯ ಆಗೌರವವನ್ನು ಜನರು ರಾಷ್ಟ್ರ ಧ್ವಜಕ್ಕೆ ತೋರುತ್ತಿರುವುದು ವಿಪರ್ಯಾಸವಾಗಿದೆ.
ಹರ್ ಘರ್ ತಿರಂಗಾ ಹೆಸರಿನಲ್ಲಿ ಎಲ್ಲೆಂದರಲ್ಲಿ ಅಗೌರವವಾಗಿ ಧ್ವಜವನ್ನು ಬಳಸುವ ಮೂಲಕ ಕಪಟ ದೇಶ ಪ್ರೇಮ ವ್ಯಕ್ತಪಡಿಸಲು ಹೊರಟವರ ವಿರುದ್ಧವೂ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ.

Join Whatsapp
Exit mobile version