Home ಟಾಪ್ ಸುದ್ದಿಗಳು ಹರ್ ಘರ್ ತಿರಂಗ ಅಭಿಯಾನ: ರಾಜ್ಯ ಸರಕಾರದಿಂದ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ

ಹರ್ ಘರ್ ತಿರಂಗ ಅಭಿಯಾನ: ರಾಜ್ಯ ಸರಕಾರದಿಂದ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ

ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ ಹರ್‌ ಘರ್‌ ತಿರಂಗ ಅಭಿಯಾನವನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಬೇಕಾಗಿ ರಾಜ್ಯ ಸರ್ಕಾರ ಆಯಾ ಜಿಲ್ಲಾಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ರಾಜ್ಯ ಸರ್ಕಾರದ ಎಸಿಎಸ್‌ ರಜನೀಶ್‌ ಗೋಯಲ್‌ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಇಲಾಖೆಗಳ ಎಸಿಎಸ್‌ಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಎಲ್ಲಾ ಡಿಸಿಗಳು ಹಾಗೂ ಎಸ್‌ಪಿಗಳಿಗೆ ರವಾನಿಸಲಾಗಿದೆ.

ಆದೇಶದಂತೆ, ಆಯಾ ಜಿಲ್ಲಾಧಿಕಾರಿಗಳು ನೋಡಲ್‌ ಅಧಿಕಾರಿಗಳಾಗಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಸಮನ್ವಯಾಧಿಕಾರಿಯಾಗಿ ನೇಮೆಕ ಮಾಡಿ ಆದೇಶಿಸಿದ್ದಾರೆ.

Join Whatsapp
Exit mobile version