ಮಂಗಳೂರು : ಭಾರತ ಸರಕಾರದ ಕಂದಾಯ ಇಲಾಖೆಯ ಜಾರಿ ನಿರ್ದೇಶನಾಲಯದ (ಇ.ಡಿ.) ನೂತನ ಉಪ ವಲಯ ಕಚೇರಿಯು ಮಂಗಳೂರಿನ ಕಂಕನಾಡಿಯ ಕೇಂದ್ರ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್ನಲ್ಲಿ ಶುಕ್ರವಾರ ಆರಂಭಗೊಂಡಿದೆ.
ಈ ಹೊಸ ಉಪ ವಲಯದ ಕಚೇರಿಯು ಬೆಂಗಳೂರು ವಲಯ ಕಚೇರಿಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಉಪ ವಲಯದ ಕಚೇರಿಯು ಉಪ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯಾಚರಿಸಲಿದೆ. ಇದು ಕರ್ನಾಟಕದ 15 ಜಿಲ್ಲೆಗಳಾದ ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಬಳ್ಳಾರಿ, ಬೀದರ್, ವಿಜಯಪುರ, ಗದಗ, ಹಾವೇರಿ, ದಾವಣಗೆರೆ, ಧಾರವಾಡ, ರಾಯಚೂರು, ಉತ್ತರ ಕನ್ನಡ, ಉಡುಪಿ ಮತ್ತು ಗುಲ್ಬರ್ಗಾ ವ್ಯಾಪ್ತಿಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.
ಕಚೇರಿಯ ವಿಳಾಸ: ಇ-7, ಕೇಂದ್ರ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್, ಕಂಕನಾಡಿ, ಮಂಗಳೂರು-575002, ಇ-ಮೇಲ್: ddmgszo-ed@gov.inನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದೆ.