Home ಟಾಪ್ ಸುದ್ದಿಗಳು ಸಂಸತ್ ನೊಳಗೆ ನುಗ್ಗಲು ಪ್ರತಾಪ್ ಸಿಂಹ ಕಾರಣ ಎಂದು ಗೌರಿ ಹತ್ಯೆ ಆರೋಪಿಯನ್ನು ಭೇಟಿ ಮಾಡಿದಾಗ...

ಸಂಸತ್ ನೊಳಗೆ ನುಗ್ಗಲು ಪ್ರತಾಪ್ ಸಿಂಹ ಕಾರಣ ಎಂದು ಗೌರಿ ಹತ್ಯೆ ಆರೋಪಿಯನ್ನು ಭೇಟಿ ಮಾಡಿದಾಗ ರುಜುವಾತಾಗಿದೆ: ಅನ್ವರ್ ಸಾದತ್

ಮಂಗಳೂರು: ಸಂಸತ್ ನೊಳಗೆ ನುಗ್ಗಲು ಪ್ರತಾಪ್ ಸಿಂಹ ಕಾರಣ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿ ಮಾಡಿದಾಗ ರುಜುವಾತಾಗಿದೆ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಉಗ್ರರಿಗೆ ಸಂಸತ್ ನೊಳಗೆ ನುಗ್ಗಲು ಪಾಸ್ ಕೊಟ್ಟ ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂಭವಿಸಿದ್ದು ಆಕಸ್ಮಿಕವೋ, ತಿಳಿಯದೆಯೋ ಅಥವಾ ಅಜಾಗೃತೆಯಿಂದಲೋ ನಡೆದ ಘಟನೆ ಅಲ್ಲ ಬದಲಿಗೆ ಉದ್ದೇಶಪೂರ್ವಕವಾಗಿಯೇ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮಾಡಿದ ಕುಕೃತ್ಯ ಎಂದು ಗೌರಿ ಲಂಕೇಶ್ ಹತ್ಯೆ ನಡೆಸಿದ ಭಯೋತ್ಪಾದಕನ ಭೇಟಿ ಮಾಡಿದಾಗ ರುಜುವಾತಾಗಿದೆ ಎಂದು ಹೇಳಿದ್ದಾರೆ.


ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ’ ಎಂದು ಪ್ರತಾಪ್ ಸಿಂಹ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನಿಮ್ಮ ಸ್ನೇಹಿತನೇ ಎಂದು ಪ್ರತಾಪ ಸಿಂಹ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version