Home ಟಾಪ್ ಸುದ್ದಿಗಳು ಬ್ಯಾಂಕ್ ದರೋಡೆಗೆ ಯತ್ನಿಸಿದ ನಾಲ್ವರ ಬಂಧನ !

ಬ್ಯಾಂಕ್ ದರೋಡೆಗೆ ಯತ್ನಿಸಿದ ನಾಲ್ವರ ಬಂಧನ !

ಚಾಮರಾಜನಗರ: ಬ್ಯಾಂಕ್  ದರೋಡೆಗೆ ಯತ್ನಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಅಭಿಷೇಕ್(26), ಶ್ರೀನಿವಾಸ್(27), ರಾಚಪ್ಪಾಜಿನಗರದ ಮುತ್ತುಸ್ವಾಮಿ(26), ಮಲ್ಲೇಶ್(26) ಬಂಧಿತರು. ಬಂಧಿತರಿಂದ ಬ್ಯಾಂಕ್ ಗಳ ಕಂಪ್ಯೂಟರ್ ಮಾನಿಟರ್, ಸಿಸಿಟಿವಿ ಡಿವಿಆರ್, ಆಂಪ್ಲಿಫೈರ್, ಎರಡು ಮೋಟಾರ್ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬ್ಯಾಂಕ್ ದರೋಡೆಗೆ ಆರೋಪಿಗಳು ಕೊಳ್ಳೇಗಾಲ ಬೆಂಗಳೂರು ಹೆದ್ದಾರಿಯಲ್ಲಿ ಹೊಂಚು ಹಾಕುತ್ತಿದ್ದರು. ಇದೀಗ ಪೊಲೀಸ್ ಅಧಿಕಾರಿಗಳು ಸೇರಿದಂತೆ 17 ಮಂದಿ ಪೊಲೀಸರ ತಂಡದಿಂದ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.

Join Whatsapp
Exit mobile version