Home ಟಾಪ್ ಸುದ್ದಿಗಳು ಮಾಜಿ ಸಿಎಂ ಸದಾನಂದ ಗೌಡ ರಾಜಕೀಯದಿಂದ ನಿವೃತ್ತಿ

ಮಾಜಿ ಸಿಎಂ ಸದಾನಂದ ಗೌಡ ರಾಜಕೀಯದಿಂದ ನಿವೃತ್ತಿ

ಹಾಸನ: ರಾಜ್ಯ ಲೋಕಸಭಾ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದು, ಮಹತ್ತರ ರಾಜಕೀಯ ಬೆಳವಣಿಗೆಯಾಗುತ್ತಿದೆ. ಅದರಂತೆ ಸಂಸದ, ಮಾಜಿ ಸಿಎಂ ಸದಾನಂದ ಗೌಡ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಡಿವಿ ಸದಾನಂದ ಗೌಡರಿಗೆ ಬಿಜೆಪಿ ಅವರಿಗೆ ಟಿಕೆಟ್ ಸಿಗೋದಿಲ್ಲ ಎಂದ ಚರ್ಚೆ ನಡೆಯುತ್ತಿತ್ತು. ಅಸಮಾಧಾನಗೊಂಡಿದ್ದ ಗೌಡರು, ಪಕ್ಷದ ವರಿಷ್ಠರು ಈ ಸಂಬಂಧ ನಿಲುವು ತಿಳಿಸಬೇಕು ಎಂದೂ ಆಗ್ರಹಿಸಿದ್ದರು. ಇದೀಗ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.

ಬಿಜೆಪಿ ನನಗೆ 30 ವರ್ಷ ಎಲ್ಲವನ್ನೂ ಕೊಟ್ಟಿದೆ. ಬಿಎಸ್​ ಯಡಿಯೂರಪ್ಪ ಬಿಟ್ಟರೆ ಇಷ್ಟು ಲಾಭ ಆಗಿರೋದು ನನಗೇನೇ. ಸಿಎಂ, ಸಂಸದ, ಕೇಂದ್ರದಲ್ಲಿ‌ ಮೋದಿ ಜೊತೆಗೆ ಕ್ಯಾಬಿನೇಟ್ ಮಂತ್ರಿ, ಸಚಿವ ಸ್ಥಾನ, ವಿರೋಧಿ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಎಲ್ಲವೂ ನನಗೆ ಸಿಕ್ಕಿದೆ. ಇಷ್ಟೇಲ್ಲಾ ಸ್ಥಾನಗಳನ್ನು ಪಕ್ಷದಿಂದ ನಾನು ಪಡೆದುಕೊಂಡಿದ್ದೇನೆ. ಇದಕ್ಕೂ ಮೀರಿ ನಾನು ಇನ್ನೂ ಆಸೆಪಟ್ಟರೆ, ಜನ ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ. ಆದ್ದರಿಂದ ಚುನಾವಣಾ ರಾಜಕೀಯದಲ್ಲಿ ಮುಂದುವರೆಯಬಾರದು ಅಂತ ತೀರ್ಮಾನ ಮಾಡಿದ್ದೇನೆ ಎಂದು ಸದಾನಂದ ಗೌಡರು ಹೇಳಿದ್ದಾರೆ.

ಮುಂದಿನ ಸಲ ಡಿಕೆಟ್ ಇಲ್ಲ ಎಂದು ಕನ್ಫರ್ಮಾದ ಬಳಿಕ ಸದಾನಂದ ಗೌಡ ವರಿಷ್ಟರ ಸೂಚನೆಯಂತೆ ಈ ನಿರ್ಧಾರ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Join Whatsapp
Exit mobile version