Home ಕರಾವಳಿ ಮಂಗಳೂರು: ಮೇ 19ರಂದು ಬಿ.ಕೆ.ಹರಿಪ್ರಸಾದ್, ಯು. ಟಿ.ಖಾದರ್ ಗೆ ಅಭಿನಂದನೆ

ಮಂಗಳೂರು: ಮೇ 19ರಂದು ಬಿ.ಕೆ.ಹರಿಪ್ರಸಾದ್, ಯು. ಟಿ.ಖಾದರ್ ಗೆ ಅಭಿನಂದನೆ

ಮಂಗಳೂರು: ಮಂಗಳೂರು ಪುರಭವನದಲ್ಲಿ ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ವಿಧಾನ ಸಭೆಯಲ್ಲಿ ಪ್ರತಿ ಪಕ್ಷ ಉಪ ನಾಯಕ ಯು. ಟಿ. ಖಾದರ್ ಅವರಿಗೆ ಮೇ 19ರ ಗುರುವಾರ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಮಾಜಿ ಮೇಯರ್ ಮತ್ತು ಅಭಿನಂದನಾ ಸಮಿತಿಯ ಸಂಚಾಲಕ ಶಶಿಧರ ಹೆಗ್ಡೆ ಹೇಳಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್ ನ ಸೇವಾದಳ ಮತ್ತು ಯುವ ಕಾಂಗ್ರೆಸ್ ಮೂಲಕ ಕಾಂಗ್ರೆಸ್ ನಲ್ಲಿ ಉತ್ತುಂಗಕ್ಕೆ ಬೆಳೆದವರು. ಹರಿಪ್ರಸಾದ್ ಅವರು ಜನಪ್ರತಿನಿಧಿ ಸಭೆಯಲ್ಲಿ ಸತ್ಯವನ್ನು ಗಟ್ಟಿಯಾಗಿ ಹೇಳುವವರು ಎಂದು ಹೆಗ್ಡೆ ತಿಳಿಸಿದರು.


ಡಿಕೆ ಶಿವಕುಮಾರ್, ಸಲೀಂ ಅಹ್ಮದ್, ಹನುಮಂತಯ್ಯ ಮೊದಲಾದವರು ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಡಿಸೋಜಾ, ಸಾಹುಲ್ ಹಮೀದ್, ಟಿ. ಕೆ. ಸುಧೀರ್, ಶುಭೋದಯ ಆಳ್ವ ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version