Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲೂ ರೈತರ ಕ್ರಾಂತಿ | ರೈಲ್ವೆ ನಿಲ್ದಾಣದಲ್ಲಿ ಅನ್ನದಾತರ ಜಮಾವಣೆ

ಬೆಂಗಳೂರಿನಲ್ಲೂ ರೈತರ ಕ್ರಾಂತಿ | ರೈಲ್ವೆ ನಿಲ್ದಾಣದಲ್ಲಿ ಅನ್ನದಾತರ ಜಮಾವಣೆ

ಬೆಂಗಳೂರು : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ, ಬೆಂಗಳೂರಿನಲ್ಲಿ ಕೈಗೊಂಡಿರುವ ರೈತರ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಈಗಾಗಲೇ ನಗರದ ಎಲ್ಲಾ ದಿಕ್ಕುಗಳಿಂದಲೂ ರೈತರು, ಮಹಿಳೆಯರು, ದಲಿತ ಪರ ಸಂಘಟನೆಗಳು ಬೆಂಗಳೂರಿನತ್ತ ಆಗಮಿಸಿದ್ದಾರೆ.

ಈಗಾಗಲೇ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿರುವ ಕೆಲ ರೈತರು ಕಾಲ್ನಡಿಗೆ ಜಾಥಾ ಮೂಲಕ ಸ್ವಾತಂತ್ರ್ಯ ಉದ್ಯಾನವನದ ಬಳಿ ಆಗಮಿಸುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ಪೊಲೀಸರು ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಹೊಸ ಕೋಟೆ ಬಳಿ ರೈತರ ಟ್ರಾಕ್ಟರ್ ಗಳಿಗೆ ತಡೆಯೊಡ್ಡಲಾಗಿದೆ ಎಂದು ವರದಿಗಳಾಗಿವೆ. ಪೊಲೀಸರ ಕ್ರಮ ಖಂಡಿಸಿ ರೈತರು ಘೋಷಣೆಗಳನ್ನು ಕೂಗಿದ್ದಾರೆ. ಹೊಸಕೋಟೆ ಟೋಲ್ ಬಳಿ ನೂರಾರು ರೈತರು ಜಮಾವಣೆಗೊಂಡಿದ್ದಾರೆ.

ಇನ್ನೊಂದೆಡೆ ಹೆಬ್ಬಾಳದಲ್ಲೂ ರೈತರು ಜಮಾವಣೆಗೊಂಡಿದ್ದಾರೆ. ಅಲ್ಲಿ ರೈತರ ಟ್ರಾಕ್ಟರ್ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರು ನಗರಕ್ಕೆ ಪ್ರವೇಶ ನೀಡಲು ಸಿದ್ಧರಾಗಿದ್ದಾರೆ.

Join Whatsapp
Exit mobile version