Home ಟಾಪ್ ಸುದ್ದಿಗಳು ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಆರೆಸ್ಸೆಸ್ ಹಲ್ಲೆಕೋರರ ದಾಳಿ: ಕರ್ನಾಟಕ ಜನಶಕ್ತಿ ತೀವ್ರ ಖಂಡನೆ

ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಆರೆಸ್ಸೆಸ್ ಹಲ್ಲೆಕೋರರ ದಾಳಿ: ಕರ್ನಾಟಕ ಜನಶಕ್ತಿ ತೀವ್ರ ಖಂಡನೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತ ಸಂಘದ ಆತ್ಮಾವಲೋಕನ ಸಭೆಗಾಗಿ ಆಗಮಿಸಿದ್ದ ರೈತಾಂದೋಲನದ ಪ್ರಮುಖ ನಾಯಕರಲ್ಲೊಬ್ಬರಾದ ರಾಕೇಶ್ ಟಿಕಾಯತ್ ಮತ್ತು ಜೊತೆಗಿದ್ದ ರೈತ ಹೋರಾಟಗಾರರ ಮೇಲೆ ಆರೆಸ್ಸೆಸ್ ಹಲ್ಲೆಕೋರರು ಮಸಿ ಎರಚಿ ದಾಳಿ ನಡೆಸಿದ್ದನ್ನು ಕರ್ನಾಟಕ ಜನಶಕ್ತಿ ತೀವ್ರವಾಗಿ ಖಂಡಿಸಿದೆ.
ದಾಳಿಕೋರರನ್ನು ಕೂಡಲೇ ಬಂಧಿಸಿ, ಈ ಗಂಭೀರ ಅಪರಾಧಕ್ಕೆ ಕಠಿಣವಾದ ಪ್ರಕರಣವನ್ನು ಅವರ ಮೇಲೆ ದಾಖಲಿಸಬೇಕು. ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ, ವೇಗವಾಗಿ ತನಿಖೆ ನಡೆದು ಅಪರಾಧಿಗಳಿಗೆ ಬೇಗ ಶಿಕ್ಷೆಯಾಗಬೇಕು. ಪ್ರಮುಖ ನಾಯಕರಿಗೆ ಸೂಕ್ತ ಭದ್ರತೆ ನೀಡದೆ ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.
ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದರಂತೆ ಭುಗಿಲೇಳುತ್ತಿರುವ ಅಶಾಂತಿಯ ಘಟನೆಗಳನ್ನು ಗಮನಿಸಿದರೆ, ಕರ್ನಾಟಕದ ಬಿಜೆಪಿ ಸರ್ಕಾರ ಪ್ರಜಾತಾಂತ್ರಿಕ ರೀತಿಯಲ್ಲಿ ಆಳ್ವಿಕೆ ನಡೆಸುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಜನತೆಗೆ ಶಾಂತಿ-ಸುವ್ಯವಸ್ಥೆ ರಕ್ಷಣೆಯ ಭರವಸೆ ನೀಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಸಂಘಟನೆ ಒತ್ತಾಯಿಸಿದೆ.

Join Whatsapp
Exit mobile version