Home ಟಾಪ್ ಸುದ್ದಿಗಳು ವಿಷವುಣಿಸಿ ಹಸು ಕರುಗಳ ಮಾರಣಹೋಮ: ಗೋಶಾಲಾ ಮಾಜಿ ಸಿಬ್ಬಂದಿಯ ಬಂಧನ

ವಿಷವುಣಿಸಿ ಹಸು ಕರುಗಳ ಮಾರಣಹೋಮ: ಗೋಶಾಲಾ ಮಾಜಿ ಸಿಬ್ಬಂದಿಯ ಬಂಧನ

ನವದೆಹಲಿ: ಗ್ರೇಟರ್ ನೋಯ್ಡಾಡ ಸೂರಜ್ ಪುರದ ಖೋಡ್ನಾ ಖುರ್ದ್ ಎಂಬಲ್ಲಿ 28 ಹಸು ಮತ್ತು 26 ಕರುಗಳಿಗೆ ವಿಷವುಣಿಸಿ ಕೊಂದ ಆರೋಪದಲ್ಲಿ ಗೋಶಾಲೆಯ ಮಾಜಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಬಂಧಿತನನ್ನು ಧರ್ಮೇಂದ್ರ ಎಂದು ಗುರುತಿಸಲಾಗಿದ್ದು, ಈತನನ್ನು ಜಾನುವಾರುಗಳ ಪಾಲನೆಗಾಗಿ ನೇಮಿಸಲಾಗಿತ್ತು.

ಈ ಮಧ್ಯೆ ಆತ ಮಾದಕದ್ರವ್ಯದ ವ್ಯಸನಿಯಾಗಿದ್ದು, ಬೆಲೆಬಾಳುವ ವಸ್ತುಗಳನ್ನು ಕದ್ದ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆತ ಗೋಶಾಲೆಯ ಮಾಲಕ ಓಂ ವೀರ್ ಸಿಂಗ್, ಮೇಲೆ ತೀವ್ರ ಸಿಟ್ಟುಗೊಂಡು ಸೇಡು ತೀರಿಸಿಕೊಳ್ಳಲು ಜಾನುವಾರುಗಳಿಗೆ ವಿಷವುಣಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಆರೋಪಿ ಧರ್ಮೇಂದ್ರ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.

Join Whatsapp
Exit mobile version