Home ಟಾಪ್ ಸುದ್ದಿಗಳು ಹಿಂದೂಗಳಿಗೆ ಅಯೋಧ್ಯೆ, ಮುಸ್ಲಿಮರಿಗೆ ಅಜ್ಮೀರ್ ಷರೀಫ್ ಗೆ ಉಚಿತ ಯಾತ್ರೆ: ಕೇಜ್ರಿವಾಲ್

ಹಿಂದೂಗಳಿಗೆ ಅಯೋಧ್ಯೆ, ಮುಸ್ಲಿಮರಿಗೆ ಅಜ್ಮೀರ್ ಷರೀಫ್ ಗೆ ಉಚಿತ ಯಾತ್ರೆ: ಕೇಜ್ರಿವಾಲ್

►ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ ಉಚಿತ ಪ್ರವಾಸ ವ್ಯವಸ್ಥೆ

ಪಣಜಿ: ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ಹಿಂದೂಗಳಿಗೆ ಅಯೋಧ್ಯೆಗೆ ಮತ್ತು ಮುಸ್ಲಿಮರಿಗೆ ಅಜ್ಮೀರ್ ಷರೀಫ್ ಹಾಗೂ ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ ಉಚಿತ ಯಾತ್ರೆಯನ್ನು ಏರ್ಪಡಿಸುತ್ತೇವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.


ಈ ಕುರಿತು ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ತೀರ್ಥ ಕ್ಷೇತ್ರಗಳಿಗೆ ಮಹತ್ವದ ಸ್ಥಾನವಿದೆ. ಕೇವಲ ದೇವರ ಆಶೀರ್ವಾದದಿಂದಲೇ ನಮಗೆ ಹೊಸ ಬೆಳಕು ಮತ್ತು ಹೊಸ ಮಾರ್ಗ ಲಭಿಸುತ್ತದೆ ಎಂದು ಹೇಳಿದ್ದಾರೆ.


ಕಳೆದ ಕೆಲವು ದಿನಗಳಲ್ಲಿ ಕೇಜ್ರಿವಾಲ್ ಗೋವಾದಲ್ಲಿ ಭರ್ಜರಿ ಚುನಾವಣಾ ಸಿದ್ಧತೆಗಳನ್ನು ನಡೆಸುತ್ತಿದ್ದು, ಹಲವು ಭರವಸೆಗಳನ್ನು ನೀಡುತ್ತಿದ್ದಾರೆ.

Join Whatsapp
Exit mobile version