ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ಡಿವೈಎಸ್ಪಿಯಿಂದ ಕಪಾಳ ಮೋಕ್ಷ

Prasthutha|

ತುಮಕೂರು: ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ತುಮಕೂರು ಡಿವೈಎಸ್ಪಿ ಪಿ. ಶ್ರೀನಿವಾಸ್ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಮನುಷ್ಯತ್ವವಿಲ್ಲದ ಸರ್ಕಾರ ಎಂದು ಹೇಳಿದ್ದಾರೆ.

- Advertisement -

ನೇಮಕಾತಿ ಹಗರಣದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಹೇಳಿಕೊಳ್ಳಲು ಬಂದವರಿಗೆ ಡಿವೈಎಸ್ಪಿ ಕಪಾಳ ಮೋಕ್ಷ ಮಾಡಿದ್ದು,  ಇದು ಮನುಷ್ಯತ್ವವಿಲ್ಲದ ಸರ್ಕಾರ, ಈ ರೀತಿಯ ಘಟನೆಗಳು ಯಾವಾಗಲೂ ನಡೆಯುತ್ತಲೇ ಇವೆ. ವಾರದ ಹಿಂದಷ್ಟೇ  ವಸತಿ ಸಚಿವ ವಿ. ಸೋಮಣ್ಣ ಅವರು ಮಹಿಳೆಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದರು. ಈ ರೀತಿಯ ಸಚಿವರು ರಾಜ್ಯದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.



Join Whatsapp
Exit mobile version