Home ಟಾಪ್ ಸುದ್ದಿಗಳು ಡಿವೈಎಸ್ ಪಿ ಮೇಲೆ ಲಾರಿ ಹರಿಸಿ ಕೊಂದ ಗಣಿ ಕಳ್ಳರು

ಡಿವೈಎಸ್ ಪಿ ಮೇಲೆ ಲಾರಿ ಹರಿಸಿ ಕೊಂದ ಗಣಿ ಕಳ್ಳರು

ಚಂಡೀಗಡ: ಹರಿಯಾಣದ ನೂಹ್ ನ ಪಚ್ ಗಾಂವ್ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಲಾರಿಯನ್ನು ತಡೆಯಲು ಯತ್ನಿಸಿದ ಡೆಪ್ಯೂಟಿ ಸೂಪರಿನ್ ಟೆಂಡೆಂಟ್ ಆಫ್ ಪೋಲೀಸ್ ಅವರನ್ನು ಲಾರಿ ಹರಿಸಿ ಗಣಿ ಕಳ್ಳರು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ.

ಕಳ್ಳ ಗಣಿಗಾರರಿಂದ ಕೊಲೆಯಾದ ಪೊಲೀಸ್ ಅಧಿಕಾರಿಯನ್ನು ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.

ಸುಳಿವು ಸಿಕ್ಕ ಆಧಾರದಲ್ಲಿ ಸ್ಥಳಕ್ಕೆ ಬಂದ ಅವರು ಅಕ್ರಮ ಗಣಿಗಾರಿಕೆಯಿಂದ ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅದರ ಚಾಲಕ ವೇಗವಾಗಿ ಲಾರಿಯನ್ನು ಅವರ ಮೇಲೆಯೇ ಹತ್ತಿಸಿದ್ದಾರೆ.

ಇನ್ನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದ ಸಿಂಗ್ ಅವರು ತಾವ್ರು ಡಿಎಸ್ ಪಿಯಾಗಿ ಸದ್ಯವೇ ಅಧಿಕಾರ ಬಡ್ತಿ ಸ್ವೀಕರಿಸಲಿದ್ದರು. ಅಧಿಕಾರಿಗೆ ನ್ಯಾಯ ಕೊಡಿಸುವುದಾಗಿ ಹರಿಯಾಣ ಸರಕಾರ ಹೇಳಿದೆ. ಸಿಂಗ್ ಸ್ಥಳದಲ್ಲೇ ಅಸು ನೀಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Join Whatsapp
Exit mobile version