Home Uncategorized ವಿರಾಜಪೇಟೆ ಮುಖ್ಯ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ್ ಸಿಂಪಿ ಎಸಿಬಿ ಬಲೆಗೆ

ವಿರಾಜಪೇಟೆ ಮುಖ್ಯ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ್ ಸಿಂಪಿ ಎಸಿಬಿ ಬಲೆಗೆ

ವಿರಾಜಪೇಟೆ : ರೋಗಿಯೊಬ್ಬನಿಂದ ಶಸ್ತ್ರ ಚಿಕಿತ್ಸೆಗಾಗಿ ಸರಕಾರಿ ವೈದ್ಯನೊಬ್ಬ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ. ವಿರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ್ ಸಿಂಪಿ ಇಂದು ಎಸಿಬಿ ದಾಳಿ ವೇಳೆ ಸೆರೆಸಿಕ್ಕಿದ್ದಾನೆ.

ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆಗೆ ಬಂದಿದ್ದ ರೋಗಿಯಿಂದ ವಿಶ್ವನಾಥ್ 5 ಸಾವಿರ ರೂ. ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ವೇಳೆ 2 ಸಾವಿರ ರೂ ಸ್ವೀಕರಿಸುವ ಸಂದರ್ಭ ಡಿವೈಎಸ್ಪಿ ಕ ಕೃಷ್ಣಕುಮಾರ್,ಎಸ್ ಐ ಕುಮಾರ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು , ವೈದ್ಯನನ್ನು ವಶಕ್ಕೆ ಪಡೆಯಲಾಗಿದೆ.

Join Whatsapp
Exit mobile version