Home ಟಾಪ್ ಸುದ್ದಿಗಳು ಸೂಚನೆ ಬರದ ಕಾರಣ ಹೆಚ್ಡಿಕೆ ಪರ ಪ್ರಚಾರ ಮಾಡಿಲ್ಲ: ಸುಮಲತಾ

ಸೂಚನೆ ಬರದ ಕಾರಣ ಹೆಚ್ಡಿಕೆ ಪರ ಪ್ರಚಾರ ಮಾಡಿಲ್ಲ: ಸುಮಲತಾ

ಉಡುಪಿ: ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಹೆಚ್‌.ಡಿ. ಕುಮಾರಸ್ವಾಮಿ ಪರ ಪ್ರಚಾರ ಮಾಡುವಂತೆ ಇದುವರೆಗೂ ಸೂಚನೆ ಬರದ ಕಾರಣ ಪ್ರಚಾರ ಮಾಡಿಲ್ಲ. ಸೂಚನೆ ಬಂದರೆ ಖಂಡಿತಾ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ಮಂಡ್ಯದ ಸಂಸದೆ ಸುಮಲತಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಟ ದರ್ಶನ್‌ಗೆ ನಿರ್ದಿಷ್ಟ ಪಕ್ಷದ ಪರವಾಗಿ ಪ್ರಚಾರ ಮಾಡುವಂತೆ ಎಂದೂ ಹೇಳಿಲ್ಲ, ಹೇಳುವುದೂ ಇಲ್ಲ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌, ರೈತ ಸಂಘ, ಬಿಜೆಪಿ ಪರ ಪ್ರಚಾರ ಮಾಡಿದ್ದರು ಎಂದು ದರ್ಶನ್ ಕೈ ಪರ ಪ್ರಚಾರಕ್ಕೆ ಅಸಮಾಧಾನವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ನನ್ನ ಪರವಾಗಿಯೂ ಪ್ರಚಾರ ಮಾಡಲು ಕರೆದಿರಲಿಲ್ಲ. ಸ್ವಇಚ್ಛೆಯಿಂದ ದರ್ಶನ್ ಹಾಗೂ ಯಶ್‌ ಪ್ರಚಾರಕ್ಕೆ ಬಂದಿದ್ದರು ಎಂದು ಸುಮಲತಾ ಹೇಳಿದರು.

Join Whatsapp
Exit mobile version