Home ಟಾಪ್ ಸುದ್ದಿಗಳು ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ: ಶ್ರೀರಾಮ ಸೇನೆಗೆ ಎಚ್ಚರಿಕೆ ನೀಡಿದ ದಲಿತ ಸೇನೆ

ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ: ಶ್ರೀರಾಮ ಸೇನೆಗೆ ಎಚ್ಚರಿಕೆ ನೀಡಿದ ದಲಿತ ಸೇನೆ

ಕಲಬುರಗಿ: ಆಝಾನ್ ಗೆ ವಿರುದ್ಧವಾಗಿ ಶ್ರೀರಾಮ ಸೇನೆ ಹಮ್ಮಿಕೊಂಡಿರುವ ಸುಪ್ರಭಾತ, ಹನುಮಾನ್ ಚಾಲೀಸಾ ಅಭಿಯಾನಕ್ಕೆ ದಲಿತ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಸೀದಿಯ ಮುಂದೆ ಬಂದು ಗೊಂದಲ ಸೃಷ್ಟಿಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಸಿದೆ.

ದಲಿತ ಸೇನೆಯ ಕಾರ್ಯಕರ್ತರು ಕಲಬುರಗಿಯ ಮೆಹಬಾಸ್ ಮಸೀದಿಯ ಮುಂದೆ ಸರ್ಪಗಾವಲು ನಿರ್ಮಿಸಿ ಮುಸ್ಲಿಮರಿಗೆ ಧೈರ್ಯ ತುಂಬಿದ್ದಾರೆ. ಕಲಬುರಗಿಯ ಸೂಪರ್ ಮಾರ್ಕೆಟ್ ನ ಮೆಹಬಾಸ್ ಮಸೀದಿ ಬಳಿ ದಲಿತ ಸಂಘಟನೆ ಕಾರ್ಯಕರ್ತರು ಮಸೀದಿಗೆ ರಕ್ಷಣೆ ನೀಡಿದ್ದಾರೆ. ಈ ಮೂಲಕ ಶ್ರೀರಾಮಸೇನೆ ಅಭಿಯಾನಕ್ಕೆ ದಲಿತ ಸೇನೆ ಟಕ್ಕರ್ ಕೊಟ್ಟಿದೆ. ಮಸೀದಿ ಸಮೀಪ ಭಜನೆ, ಮಂತ್ರ ಪಠಣಕ್ಕೆ ಅವಕಾಶ ನೀಡಬಾರದು ಎಂದು ದಲಿತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಇದೇ ಮಸೀದಿ ಸಮೀಪ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ದಲಿತ್ ಸೇನೆ ಕಾರ್ಯಕರ್ತರು ರಂಗಕ್ಕಿಳಿದು, ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಮಸೀದಿಗೆ ರಕ್ಷಣೆ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Join Whatsapp
Exit mobile version