Home ಕರಾವಳಿ SDPI ಕಾರ್ಯಕರ್ತನ ಕೊಲೆಗೆ ಯತ್ನ | ಸಿಪಿಐ(ಎಂ) ಕಾರ್ಯಕರ್ತರ ಕೈವಾಡ ಶಂಕೆ

SDPI ಕಾರ್ಯಕರ್ತನ ಕೊಲೆಗೆ ಯತ್ನ | ಸಿಪಿಐ(ಎಂ) ಕಾರ್ಯಕರ್ತರ ಕೈವಾಡ ಶಂಕೆ

ಕಾಸರಗೋಡು : ಎಸ್ಡಿಪಿಐ ಕಾರ್ಯಕರ್ತನ ಕೊಲೆಗೆ ಯತ್ನಿಸಿದ ಘಟನೆ ಕಾಸರಗೋಡು ಸಮೀಪದ ಕುಂಬಳೆ ಎಂಬಲ್ಲಿ ನಡೆದಿದೆ.ಎಸ್ದಿಪಿಐ ಆರಿಕ್ಕಾಡಿ ಬ್ರಾಂಚ್ ಅಧ್ಯಕ್ಷರಾಗಿರುವ ಝೈನುದ್ದೀನ್ (30) ಎಂಬವರನ್ನು ದುಷ್ಕರ್ಮಿಗಳು ಗಂಭೀರವಾಗಿ ಇರಿದು ಪರಾರಿಯಾಗಿದ್ದಾರೆ.

ಅರಿಕ್ಕಾಡಿ ಕಡವತ್ ನಿವಾಸಿ ಝೈನುದ್ದೀನ್(30) ಎಂಬವರ ಮೇಲೆ ಕೊಲೆಯತ್ನ ನಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ವೇಳೆ ಘಟನೆ ನಡೆದಿದ್ದು, ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆಯತ್ನ ನಡೆಸಿ ಪರಾರಿಯಾಗಿದ್ದಾರೆ . ಕುಂಬಳೆ ಠಾಣಾ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರೋಪಿಗಾಗಿ ಶೋಧ ಮುಂದುವರೆದಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ಡಿಪಿಐ ಸ್ಥಳೀಯ ನಾಯಕರು ಈ ದುಷ್ಕೃತ್ಯದ ಹಿಂದೆ ಸಿಪಿಐ(ಎಂ) ಕಾರ್ಯಕರ್ತರು ಇದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version