Home ಕರಾವಳಿ ಗಣರಾಜ್ಯೋತ್ಸವಕ್ಕೆ ಆಹ್ವಾನ ಪಡೆದ ಬೈಂದೂರಿನ ದಂಪತಿ

ಗಣರಾಜ್ಯೋತ್ಸವಕ್ಕೆ ಆಹ್ವಾನ ಪಡೆದ ಬೈಂದೂರಿನ ದಂಪತಿ

ಬೈಂದೂರು: ಬೈಂದೂರಿನ ಅನುದೀಪ್‌ ಹಾಗೂ ಮಿನುಷಾ ದಂಪತಿಗೆ ಈ ವರ್ಷ ದಿಲ್ಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಕಚೇರಿಯಿಂದ ಆಹ್ವಾನ ಬಂದಿದ್ದು, ಅವರು ಹೊಸದಿಲ್ಲಿಗೆ ತೆರಳಿದ್ದಾರೆ.

2020ರ ನವೆಂಬರ್‌ನಲ್ಲಿ ಅವರ ವಿವಾಹವಾಗಿದ್ದು, ಎಲ್ಲರಂತೆ ದೂರದ ಪ್ರವಾಸಿ ತಾಣಗಳಿಗೆ ತೆರಳಿ ಮಧುಚಂದ್ರ ಆಚರಿಸುವ ಬದಲು ಬೈಂದೂರಿನ ಸೋಮೇಶ್ವರ ಬೀಚ್‌ ಸ್ವಚ್ಛತೆ ಮೂಲಕ ಗುರುತಿಸಿಕೊಂಡಿದ್ದರು. ಇವರ ವಿಷೇಷತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದು ಅವರದನ್ನು ತಮ್ಮ ಮನ್‌ ಕೀ ಬಾತ್‌ನಲ್ಲಿ ಉಲ್ಲೇಖ ಮಾಡಿದ್ದರು.

Join Whatsapp
Exit mobile version