Home ಟಾಪ್ ಸುದ್ದಿಗಳು ದೇಶಕ್ಕೆ ತುರ್ತಾಗಿ ಗಾಂಧೀಜಿ ಬೇಕಾಗಿದೆ: ನಟ ಮಂಡ್ಯ ರಮೇಶ್

ದೇಶಕ್ಕೆ ತುರ್ತಾಗಿ ಗಾಂಧೀಜಿ ಬೇಕಾಗಿದೆ: ನಟ ಮಂಡ್ಯ ರಮೇಶ್

ಬೆಂಗಳೂರು: ದೇಶಕ್ಕೆ ತುರ್ತಾಗಿ ಗಾಂಧೀಜಿ ಬೇಕಾಗಿದೆ ಎಂದು ರಂಗಕರ್ಮಿ, ನಟ ಮಂಡ್ಯ ರಮೇಶ್‌ ಹೇಳಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ರಂಗ ಚಾವಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧೀಜಿ ಎನ್ನುವ ವ್ಯಕ್ತಿತ್ವ ಅದ್ಭುತ ರೂಪಕ. ಈ ದೇಶಕ್ಕೆ ತುರ್ತಾಗಿ ಗಾಂಧೀಜಿ ಬೇಕಾಗಿದೆ. ಇಂದಿಗೂ ನನಗೂ ಮಹಾತ್ಮ ಗಾಂಧೀಜಿಯೇ ಮಾದರಿ’ ಎಂದು ಹೇಳಿದ್ದಾರೆ.

‘ಗಾಂಧೀಜಿ ಸಹ ಬದಲಾಗಿದ್ದು ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಮೇಲೆಯೇ. ನಾಟಕ ಪ್ರಬಲವಾದ ಮಾಧ್ಯಮ. ಆದರೆ, ನಾಟಕ, ಸಂಗೀತದಿಂದ ದಿಢೀರ್‌ ಬದಲಾವಣೆಗಳಾಗುವುದಿಲ್ಲ. ಅದು ಎದೆಗೆ ಬಿದ್ದ ಅಕ್ಷರದಂತೆ. ನಿಧಾನವಾಗಿ ಬದಲಾವಣೆಗಳಾಗುತ್ತವೆ’ ಎಂದು ರಮೇಶ್ ಹೇಳಿದರು.

Join Whatsapp
Exit mobile version