Home ಟಾಪ್ ಸುದ್ದಿಗಳು ಕೋಮುವಾದಿ ಕೇಶವ ಹೆಡಗೇವಾರ್‌ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕೈ ಕಟ್ಟಿ ಕುಳಿತ ಕಾಂಗ್ರೆಸ್: ರಮೇಶ್ ಕುಮಾರ್...

ಕೋಮುವಾದಿ ಕೇಶವ ಹೆಡಗೇವಾರ್‌ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕೈ ಕಟ್ಟಿ ಕುಳಿತ ಕಾಂಗ್ರೆಸ್: ರಮೇಶ್ ಕುಮಾರ್ ಟೀಕೆ

ಚಿಕ್ಕಬಳ್ಳಾಪುರ: ಆರ್‌ಎಸ್‌ಎಸ್‌ ಸಂಸ್ಥಾಪಕ ಮತ್ತು ರಾಷ್ಟ್ರಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದ ಕೋಮುವಾದಿ ಕೇಶವ ಬಲಿರಾಮ್‌ ಹೆಡಗೇವಾರ್‌ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕಾಂಗ್ರೆಸ್ ಪಕ್ಷ ಪ್ರತಿಭಟಿಸದಿರುವುದು ಸೋಜಿಗ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ. ಮಕ್ಕಳು ಓದುವ ಪಠ್ಯಪುಸ್ತಕಗಳಲ್ಲಿ ಕೋಮುವಾದಿಗಳ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆ ಹೊತ್ತಿನ ಗಂಜಿ ಹುಡುಕಿಕೊಳ್ಳುತ್ತಿವೆ. ಈ ಪಕ್ಷಗಳಿಗೆ ಕೇವಲ ಹೊತ್ತು ಹೊತ್ತಿಗೆ ಗಂಜಿಯೇ ಮುಖ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ಜನಹಿತಕ್ಕಿಂತ ಜನರನ್ನು ಮರುಳುಮಾಡುವ ಮಾತುಗಳೇ ಅಧಿಕವಾಗಿವೆ. ಇದೊಂದು ಬುಡುಬುಡಿಕೆ ಆಳ್ವಿಕೆ’ ಎಂದು ಟೀಕಿಸಿದರು.

Join Whatsapp
Exit mobile version