Home ಟಾಪ್ ಸುದ್ದಿಗಳು ಶಿವಸೇನೆಯ ಬಂಡಾಯ ಶಾಸಕರಿರುವ ರೆಸೋರ್ಟ್ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ

ಶಿವಸೇನೆಯ ಬಂಡಾಯ ಶಾಸಕರಿರುವ ರೆಸೋರ್ಟ್ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ

ಗುವಾಹಟಿ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಶಿವಸೇನೆಯಿಂದ ಬಂಡಾಯವೆದ್ದ 40 ಕ್ಕಿಂತ ಹೆಚ್ಚು ಶಾಸಕರು ತಂಗಿರುವ ಗುವಾಹಟಿಯ ಹೋಟೆಲ್ ಮುಂಭಾಗದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

‘ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗುತ್ತಿರುವಾಗ, ರೆಸೋರ್ಟ್ ರಾಜಕಾರಣದ ಬಲೆಯಲ್ಲಿ ಸಿಲುಕಿರುವ ಶಿವಸೇನೆಯ ಶಾಸಕರು ಇಲ್ಲಿರುವುದು ಸೂಕ್ತವಲ್ಲ. ಈ ಕೂಡಲೇ ಇಲ್ಲಿಂದ ತೊರೆಯಬೇಕು’ ಎಂದು ಕಾಂಗ್ರೆಸ್ ಪ್ರತಿಭಟನೆ ಮೂಲಕ ಒತ್ತಾಯಿಸಿದೆ.

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯವೆದ್ದಿದ್ದರು.

Join Whatsapp
Exit mobile version