Home ಕರಾವಳಿ ಕಡಂಬಾರು ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಕಡಂಬಾರು ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಮಂಜೇಶ್ವರ: ಕಡಂಬಾರು ಸರಕಾರಿ ಪ್ರೌಢಶಾಲೆಯಲ್ಲಿ ಎರಡು ಕಂಪ್ಯೂಟರ್ ಲ್ಯಾಬ್ ಗಳ ನವೀಕರಣ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.


ಶಾಲಾ ಅಧ್ಯಾಪಕರು ಸಿಬ್ಬಂದಿ ವರ್ಗದವರು ಮತ್ತು ನಿವೃತ್ತ ಅಧ್ಯಾಪಕರ ಸಹಕಾರದಿಂದ ಎರಡು ಲ್ಯಾಬ್ ಗಳ ನವೀಕರಣ ಮಾಡಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಟೀಚರ್ ವಹಿಸಿದ್ದರು. ಪ್ರೌಢಶಾಲೆಯ ಕಂಪ್ಯೂಟರ್ ಲ್ಯಾಬ್ ಅನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ . ಎನ್ ಉದ್ಘಾಟಿಸಿದರು.


ಪ್ರೈಮರಿ ವಿಭಾಗದ ಕಂಪ್ಯೂಟರ್ ಲ್ಯಾಬಿನ ಉದ್ಘಾಟನೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ನೆರವೇರಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಶಿಕ್ಷಕ ಪುರಸ್ಕಾರ ವಿಜೇತ ನಾರಾಯಣ ದೇಲಂಪಾಡಿ ಭಾಗವಹಿಸಿ ಮಾತನಾಡಿದರು. ಪಿಟಿಎ ಅಧ್ಯಕ್ಷ ಅಬ್ದುಲ್ ಲತೀಫ್, ಎಸ್ಎಂಸಿ ಅಧ್ಯಕ್ಷ ಮುತ್ತಲಿಬ್, ಎಂ ಪಿ ಟಿ ಎ ಅಧ್ಯಕ್ಷೆ ರುಕ್ಸಾನ ಅಶ್ರಫ್,
ನಿವೃತ್ತ ಅಧ್ಯಾಪಕ ವಿಜಯಕುಮಾರ್. ಎ. , ಹಿರಿಯ ಅಧ್ಯಾಪಕಿ ಕನಕ೦ ಕೆ .ಎಂ , ಮೂಸಕುಂಞ .ಡಿ. ಶುಭ ಕೋರಿದರು. ಸಭೆಯಲ್ಲಿ ಅಧ್ಯಾಪಕ ಧರ್ಮಾನಂದ್ ಕುರುಪ್ ಸ್ವಾಗತಿಸಿ, ಅಧ್ಯಾಪಕ ನಯನ ಪ್ರಸಾದ್ ಎಚ್. ಟಿ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಇಸ್ಮಾಯಿಲ್ ಮಾಸ್ಟರ್ ನಡೆಸಿದರು.

Join Whatsapp
Exit mobile version