Home Uncategorized ಮಡಿಕೇರಿ: ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು | ಅಪಾರ ಹಾನಿ

ಮಡಿಕೇರಿ: ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು | ಅಪಾರ ಹಾನಿ

ಮಡಿಕೇರಿ: ಗ್ರಾ.ಪಂ ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಸಾಕಷ್ಟು ಹಾನಿ ಮಾಡಿದೆ. ತೋಟದ ನೀಲಗಿರಿ ಮರಗಳನ್ನು ನೆಲಗುರುಳಿಸಿದೆ. ಆನೆಗಳ ದಾಳಿಯನ್ನು ತಡೆಯಲು ಕಾವೇರಿ ನದಿ ಬಳಿ ಅಳವಡಿಸಿದ್ದ ರೈಲ್ವೆ ಕಂಬಿಯ ಬೇಲಿಯನ್ನು ಕೂಡ ಕಾಡಾನೆಗಳು ಜಖಂಗೊಳಿಸಿವೆ.

ತೋಟದಲ್ಲಾಗಿರುವ ಹಾನಿಗೆ ಅರಣ್ಯ ಇಲಾಖೆ ಪರಿಹಾರ ಈ ಕೂಡಲೇ ನೀಡಬೇಕೆಂದು ಸ್ಥಳೀಯರಾದ ಮನುಮಹೇಶ್ ಒತ್ತಾಯಿಸಿದ್ದಾರೆ. ಅಲ್ಲದೇ ಆನೆಗಳನ್ನು ದಾಳಿಯನ್ನು ತಡುವೆಯಲ್ಲಿ ರೈಲ್ವೇ ಕಂಬಿಗಳು ವಿಫಲವಾಗಿದ್ದು ಸೋಲಾರ್ ಬೇಲಿಯನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಡಾನೆಗಳ ಹಾವಳಿಗೆ ಹೈರಾಣಾಗಿರುವ ಬೆಳೆಗಾರರು ಸೂಕ್ತ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.

Join Whatsapp
Exit mobile version