Home ಟಾಪ್ ಸುದ್ದಿಗಳು ವಾಸ್ತು ಸರಿಯಿಲ್ಲವೆಂದು ಮುಚ್ಚಿದ್ದ ಕಚೇರಿಯ ಬಾಗಿಲು ತೆರೆಸಿ ಒಳ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ

ವಾಸ್ತು ಸರಿಯಿಲ್ಲವೆಂದು ಮುಚ್ಚಿದ್ದ ಕಚೇರಿಯ ಬಾಗಿಲು ತೆರೆಸಿ ಒಳ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಾಸ್ತು ಸರಿ ಇಲ್ಲ ಎಂದು ಮುಚ್ಚಿದ್ದ ಕಚೇರಿಯ ದಕ್ಷಿಣ ದ್ವಾರವನ್ನು ಸಿಎಂ ಸಿದ್ದರಾಮಯ್ಯ ಅವರು ತೆರೆಸಿ ಅನ್ನಭಾಗ್ಯ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಸಭೆ ಹಿನ್ನೆಲೆ ಕಚೇರಿಗೆ ಆಗಮಿಸಿದಾಗ ದಕ್ಷಿಣ ದ್ವಾರ ಮುಚ್ಚಿರುವುದನ್ನು ಗಮನಿಸಿದ ಸಿದ್ದರಾಮಯ್ಯ ಅವರು, ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ವಾಸ್ತು ಕಾರಣದಿಂದ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದಾರೆ. ಅಧಿಕಾರಿಗಳ ಮಾತು ಕೇಳೀ ಅಲ್ಲೇ ನಿಂತ ಸಿದ್ದರಾಮಯ್ಯ ಅವರು ಬಾಗಿಲು ತೆರೆಯುವಂತೆ ಸೂಚಿಸಿದರು. ಅದರಂತೆ ಪಶ್ಚಿಮ ದ್ವಾರದಿಂದ ಒಳಗೆ ಹೋದ ಸಿಬ್ಬಂದಿ ದಕ್ಷಿಣದ ದ್ವಾರವನ್ನು ತೆರೆದಿದ್ದಾರೆ.

ದಕ್ಷಿಣ ದ್ವಾರ ತೆರೆಯುತ್ತಿದ್ದಂತೆ ಅದೇ ದ್ವಾರದ ಮೂಲಕವೇ ಸಿದ್ದರಾಮಯ್ಯ ತಮ್ಮ ಕಚೇರಿ ಪ್ರವೇಶಿಸಿದರು. ಈ ವೇಳೆ ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದು ಅಧಿಕಾರಿಗಳಿಗೆ ತಮ್ಮ ನಿಲುವನ್ನು ಹಂಚಿಕೊಂಡರು.

Join Whatsapp
Exit mobile version