Home ಟಾಪ್ ಸುದ್ದಿಗಳು ಕಲುಶಿತ ನೀರು ಕುಡಿದು ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು: SDPI ಖಂಡನೆ

ಕಲುಶಿತ ನೀರು ಕುಡಿದು ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು: SDPI ಖಂಡನೆ

ಚಿಕ್ಕಮಗಳೂರು: ಕಲುಷಿತಗೊಂಡ ನೀರು ಕುಡಿದು ಅಸ್ವಸ್ಥಗೊಂಡ 80 ಕ್ಕೂ ಹೆಚ್ಚು ಜನ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ತಮಿಳು ಕಾಲೋನಿ ವಾರ್ಡ್ ನಂ 22 – 23  ರಲ್ಲಿ ನಡೆದಿದೆ.

ಈ ಪ್ರದೇಶದಲ್ಲಿ ಯುಜಿಡಿ ನೀರು ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಒಟ್ಟಿಗೆ ಇದ್ದು ಬಹಳ ತಗ್ಗು ಪ್ರದೇಶ ಇರುವುದರಿಂದ ಕುಡಿಯುವ ನೀರಿನ ಪೈಪ್ ಗೆ ಯು ಜಿ ಡಿ ಕಲುಷಿತಗೊಂಡ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಅದರಲ್ಲಿ ಸಣ್ಣ ಸಣ್ಣ ಹುಳಗಳು ಸಹ ಕಂಡುಬಂದಿದ್ದವು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ಹಿಂದೆ ನಗರ ಸಭೆ ಸದಸ್ಯರಿಗೆ ಮತ್ತು ಕಮೀಷನರ್ ಗೆ ಎಸ್ಡಿಪಿಐ ದೂರು ನೀಡಿದ್ದು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಈ ಅನಾಹುತ ಸಂಭವಿಸಿದೆ‌. ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣವೆಂದು SDPI ಅರೋಪಿಸಿದೆ.

ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಯವರು ಎಲ್ಲಾ ವಿಚಾರದಲ್ಲೂ ಹಿಂದೂ ಮುಸ್ಲಿಂ ನಡುವೆ ಕೋಮುವಾದದ ಬಣ್ಣ ನೀಡಿ ಇಡೀ ಕರ್ನಾಟಕ್ಕೆ ಬೆಂಕಿ ಇಡವುದರಲ್ಲಿ‌ ತಲ್ಲೀಣರಾಗಿದ್ದಾರೆ. ಆದರೆ ತಮ್ಮದೇ ಕ್ಷೇತ್ರದಲ್ಲಿ ಜನ ಸಾಯುತ್ತಿದ್ದರು ನೋಡಲು ಸಮಯವಿಲ್ಲ, ಸೌಜನ್ಯಕ್ಕೂ ಒಂದು ಬಾರಿ ಭೇಟಿ ನೀಡಿ ವಿಚಾರಿಸಲು ಸಮಯ ಸಿಗದಿರುವುದು ಕ್ಷೇತ್ರದ ದುರಾದೃಷ್ಟ.

ಜನರ ಜೀವನದ ಜೊತೆ ಚೆಲ್ಲಾಟ ವಾಡುತ್ತಿರುವ ಚಿಕ್ಕಮಗಳೂರಿನ ನಗರಸಭೆ, ಹಾಗೂ ಶಾಸಕರ ನಡತೆಯನ್ನು SDPI ತೀವ್ರವಾಗಿ ಖಂಡಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಗರ ಸಭಾ ಅಯುಕ್ತರು, ಸದಸ್ಯರು ಮತ್ತು ಶಾಸಕರು ಆದಷ್ಟು ಬೇಗ ಗಮನಹರಿಸಿ ಅಸ್ವಸ್ಥವಾಗಿರುವವರ ಚಿಕಿತ್ಸಾ ಖರ್ಚು ಭರಿಸಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ ಬೇಕು, ಹಾಗೂ ನಗರದ ನೀರಿನ ಸಮಸ್ಯೆಯನ್ನು ಅತಿ ಶೀಘ್ರದಲ್ಲಿ ಪರಿಹರಿಸಬೇಕು. ಈ ವಿಷಯಕ್ಕೆ ಸಂಭಂದಿಸಿ ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ದಲಿತ, ಪ್ರಗತಿಪರ ಸಂಘಟನೆಗಳು ಹಾಗೂ ಜನಪರ ಚಿಂತಕರನ್ನು ಒಟ್ಟುಗೂಡಿಸಿ ನಗರಸಭೆಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದೆಂದು SDPI ನಾಯಕರು ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version