Home ಟಾಪ್ ಸುದ್ದಿಗಳು ಬೈಕ್ ಗೆ ಬೊಲೆರೋ ಕಾರು ಡಿಕ್ಕಿ; ಶಿಕ್ಷಕ ದಂಪತಿ ಸಾವು

ಬೈಕ್ ಗೆ ಬೊಲೆರೋ ಕಾರು ಡಿಕ್ಕಿ; ಶಿಕ್ಷಕ ದಂಪತಿ ಸಾವು

ಬೆಂಗಳೂರು : ದ್ವಿಚಕ್ರ ವಾಹನವೊಂದಕ್ಕೆ ಬೊಲೆರೋ ಕಾರು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ದಂಪತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಬಳಿ ನಡೆದಿದೆ.

ಯಲ್ದೂರು ಗ್ರಾಮದ ಚಿಂತಾಮಣಿಯಲ್ಲಿ ವಾಸವಾಗಿದ್ದ ದಯಾನಂದಬಾಬು(49) ಹಾಗೂ ಎಸ್.ರಾಜೇಶ್ವರಿ(45) ಮೃತ ದುರ್ದೈವಿಗಳು.

ದಯಾನಂದಬಾಬು ಶ್ರೀನಿವಾಸಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿ ಶಿಕ್ಷಕರಾಗಿದ್ದರೆ,ಪತ್ನಿ ರಾಜೇಶ್ವರಿ ಇದೇ ತಾಲೂಕಿನ ಮ್ಯಾಕಲಘಟ್ಟ ಗ್ರಾಮದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪ್ರತಿನಿತ್ಯ ನಗರದಿಂದ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ಹೋಗಿ ಬರುತ್ತಿದ್ದ ದಂಪತಿ ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬರುತ್ತಿದ್ದಾಗ ಚಿಂತಾಮಣಿಯಿಂದ ಶ್ರೀನಿವಾಸಪುರದ ಕಡೆಗೆ ಹೋಗುತ್ತಿದ್ದ ಬೊಲೆರೋ ಕಾರು ಡಿಕ್ಕಿ ಹೊಡೆದಿದೆ.

ಬೊಲೆರೋ ಕಾರು ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯೇ ಘಟನೆಗೆ ಕಾರಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ  ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಕಾರು ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version