ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ: ಸ್ವಪಕ್ಷದ ವಿರುದ್ಧವೇ ಸೋಮಣ್ಣ ಅಸಮಾಧಾನ

Prasthutha|

- Advertisement -

ಬೆಂಗಳೂರು: ಬಿಜೆಪಿಗೆ ಬರುವವರೆಗೆ ನಾನು ಸೋತೆ ಇರಲಿಲ್ಲ. ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ ಎಂದು ಮಾಜಿ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬರುವವರೆಗೆ ನಾನು ಸೋತೆ ಇರಲಿಲ್ಲ. ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ. ಶ್ರೀನಿವಾಸ್ ಸಾಹೇಬ್ರೆ ನಾನು ಸೋತೆ ಇಲ್ಲ. ಕಾಂಗ್ರೆಸ್​ನಲ್ಲಿ ನಿಂತು ಗೆದ್ದಿದ್ದೇನೆ. ಹಾಗೇ ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ . ಬಿಜೆಪಿ ಬಂದು ಸೋತೆ . ನಾನು ಏನಾಗಿಬಿಡುತ್ತೇನೆ ಎನ್ನುವ ಭಯದಲ್ಲಿ ಸೋಲಿಸಿದರು ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸ್ವಪಕ್ಷ ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದರು.

- Advertisement -

ಬಿಹಾರದಲ್ಲಿ ಜಾತಿ ಗಣತಿ‌ ಬಿಡುಗಡೆ ವಿಚಾರವಾಗಿ ಮಾತನಾಡಿ, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. 2015ರಲ್ಲಿ ಜಾತಿ ಗಣತಿ ವರದಿಯನ್ನ ನೋಡಿದ್ರೆ ಆಶ್ಚರ್ಯ ಆಗುತ್ತದೆ. ಈ ಸಮಾಜವನ್ನ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಬಸವ ಜಯಂತಿ ಕಾರ್ಯಕ್ರಮ ಎರಡು ದಿನ ನಡೆದಿದೆ. ಬೇರೆಯದನ್ನ ಬಿಟ್ಟು ಅರ್ಹತೆ ಇದೆ ಅಂತಹರಿಗೆ ಅವಕಾಶ ಕೊಡಿ. ನೀವುಗಳು ಒಗ್ಗಟ್ಟಾಗಬೇಕು. ಇಲ್ಲ ಅಂದ್ರೆ ಹೇಳೋರೋ ಕೇಳೋರೊ ಇಲ್ಲದಂತಾಗುತ್ತದೆ ಎಂದರು.

Join Whatsapp
Exit mobile version