Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ: ಪ್ರದೀಪ್ ಈಶ್ವರ್

ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ಭಯ: ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯರನ್ನು ಸಿಎಂ ಆಗಿ ನಾವು ಉಳಿಸಿಕೊಳ್ಳುತ್ತೇವೆ. ಮುಡಾ ಹಗರಣದಲ್ಲಿ ಸಿಎಂಗೆ ಬಿಜೆಪಿಯವರು ಏನೂ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು. ಸಿದ್ದರಾಮಯ್ಯ ಅವರನ್ನು ನೋಡಿದರೆ ಬಿಜೆಪಿಯವರಿಗೆ ಭಯ. ಸಿದ್ದರಾಮಯ್ಯರನ್ನು ಸಹಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಮತ್ತು ವಿಜಯೇಂದ್ರಗೆ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.


ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಲು ಪ್ರಯತ್ನ ವಿಚಾರವಾಗಿ ಕೆಲ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಕುರಿತು ಮಾತನಾಡಿರುವ ಅವರು, ಆಪರೇಷನ್ ಕಮಲ ಮಾಡಲು ನಮ್ಮ ಪಕ್ಷದಲ್ಲಿ ಕೆ.ಸುಧಾಕರ್ ಅಂತಹ ಎಂಎಲ್ಎ ಇಲ್ಲ. ಅದು ಹೇಗೆ ಅಪರೇಷನ್ ಕಮಲ ಮಾಡ್ತಾರೆ? ನಮ್ಮ ಶಾಸಕರು ಯಾರೂ ಅಂತವರಲ್ಲ. 135 ಜನ ಎಂಎಲ್ಎಗಳು ಇದ್ದೀವಿ, ಬಿಜೆಪಿಯವರಿಗೆ ನಮ್ಮನ್ನು ಖರೀದಿಸುವ ಶಕ್ತಿ ಇದ್ಯಾ ಎಂದು ಪ್ರಶ್ನಿಸಿದರು.


ಬಿ.ವೈ ವಿಜಯೇಂದ್ರ ಅವರು ಅವರ ಅಪ್ಪನ ಹೆಸರಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಕುಮಾರಸ್ವಾಮಿ ಅವರು ಪ್ರಧಾನಿ ಮಗ ಸಿಎಂ ಆಗೋದು ಗ್ರೇಟ್ ಅಲ್ಲ. ಕನಕಪುರದ ರೈತನ ಮಗ ಡಿ.ಕೆ ಶಿವಕುಮಾರ್ ಅವರು ಡಿಸಿಎಂ ಆಗೋದು ಗ್ರೇಟ್. ಕುಮಾರಸ್ವಾಮಿ ತಮ್ಮದೇ ಸಮುದಾಯದ ನಾಯಕನನ್ನು ಸಹಿಸುತ್ತಿಲ್ಲ. ಜೊತೆಗೆ ಸಿದ್ದರಾಮಯ್ಯ ಅವರ ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಕೊನೆಗೆ ನಿಮ್ಮ ಬ್ರದರ್ ಅಣ್ಣನ ಮಕ್ಕಳನ್ನ ಬೆಳವಣಿಗೆಯನ್ನು ಕೂಡ ಸಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp
Exit mobile version