Home ಟಾಪ್ ಸುದ್ದಿಗಳು ಮೋದಿ ಸಮಾವೇಶಕ್ಕೆ ಕಾರ್ಮಿಕರನ್ನು ಕರೆತಂದು ಹಣ ಕೊಡದೆ ವಂಚಿಸಿದ ಬಿಜೆಪಿ: ಕಾಂಗ್ರೆಸ್

ಮೋದಿ ಸಮಾವೇಶಕ್ಕೆ ಕಾರ್ಮಿಕರನ್ನು ಕರೆತಂದು ಹಣ ಕೊಡದೆ ವಂಚಿಸಿದ ಬಿಜೆಪಿ: ಕಾಂಗ್ರೆಸ್

ಬೆಂಗಳೂರು: ಹಿಂದೆ ಸಮಾವೇಶಕ್ಕೆ 500 ನೀಡುವ ಭರವಸೆ ಕೊಟ್ಟು ಕರೆತಂದವರಿಗೆ 200 ಕೊಟ್ಟು ವಂಚಿಸಿದ್ದ ಬಿಜೆಪಿ ಈಗ ಮತ್ತೊಮ್ಮೆ ಒಂದು ರೂಪಾಯಿಯನ್ನೂ ಕೊಡದೆ ವಂಚಿಸಿದೆ. ಹಣ ಸಿಗದೆ ಕಾರ್ಮಿಕರು ಬಿಜೆಪಿ ವಿರುದ್ಧ ಪೊಲೀಸ್ ದೂರು ನೀಡುವಂತಾಗಿದ್ದು ಬಿಜೆಪಿ ವಂಚನೆಗೆ ಹಿಡಿದ ಕನ್ನಡಿ. ಕಮಿಷನ್ ಲೂಟಿ ಈಗ 100% ಗೆ ಏರಿಕೆಯಾಗಿದೆಯೇ ಬಿಜೆಪಿಯವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ” ಹಾಗಾಗಿ ಖಾಲಿ ಕುರ್ಚಿಗಳಿಗೆ ಭಯ ಬಿದ್ದ ಬಿಜೆಪಿ ಹಣದ ಆಮಿಷ ಒಡ್ಡಿ ಜನರನ್ನು ಕರೆತಂದಿದೆ. ವಂಚಕ ಬಿಜೆಪಿ ಕಾರ್ಮಿಕರಿಗೆ ಹಣ ನೀಡುವುದರಲ್ಲೂ ವಂಚಿಸಿದೆ, ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದ ಕಮಿಷನ್ 100% ಗೆ ಏರಿಕೆಯಾಗಿದೆಯೇ?! ಎಂದು ಪ್ರಶ್ನಿಸಿದೆ.

ನರೇಂದ್ರ ಮೋದಿ ಅವರೇ, ನಿಮ್ಮನ್ನು ಮೆಚ್ಚಿಸಲು ಬಿಜೆಪಿ ನಾಯಕರು ಹಣ ಕೊಡುತ್ತೇವೆ ಎಂದು ಕರೆತಂದ ಜನರಿಗೆ 500 ನೀಡದೆ ವಂಚಿಸಿದ್ದಾರೆ. ಕನಿಷ್ಠ ಮೋಸ ಹೋದ ಕಾರ್ಮಿಕರಿಗಾದರೂ ನ್ಯಾಯ ಕೊಡಿಸಿ, ಅವರ ಪಾಲಿನ 500 ರೂಪಾಯಿಯನ್ನು ಕೊಡಿಸಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Join Whatsapp
Exit mobile version