Home ಟಾಪ್ ಸುದ್ದಿಗಳು ನಿನ್ನೆ ರಾತ್ರಿವರೆಗೂ ಸಿಡಿ ಬಿಡುತ್ತೇನೆ ಎಂದು ಡಿಕೆಶಿ ಬ್ಲ್ಯಾಕ್ ಮೇಲ್ ಮಾಡಿದ್ದರು: ಬಿಜೆಪಿ ಅಭ್ಯರ್ಥಿ ರಮೇಶ...

ನಿನ್ನೆ ರಾತ್ರಿವರೆಗೂ ಸಿಡಿ ಬಿಡುತ್ತೇನೆ ಎಂದು ಡಿಕೆಶಿ ಬ್ಲ್ಯಾಕ್ ಮೇಲ್ ಮಾಡಿದ್ದರು: ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಆರೋಪ

ಬೆಳಗಾವಿ: ನಿನ್ನೆ ರಾತ್ರಿವರೆಗೂ ಸಿಡಿ ಬಿಡುತ್ತೇನೆ ಎಂದು ಎಂದು ಡಿ.ಕೆ.ಶಿವಕುಮಾರ್ ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.


ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೋಷಣೆ ಆದಾಗಿನಿಂದ ಡಿಕೆ ಶಿವಕುಮಾರ್ ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಾರೆ. ಕೇಂದ್ರ ಗೃಹಸಚಿವರು ಹಾಗೂ ಮುಂಬರುವ ರಾಜ್ಯದ ಮುಖ್ಯಮಂತ್ರಿ ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಡಿಕೆಶಿ ಸಿಡಿ ಮಾಡಿ ನೂರಾರು ಜನರ ಬಾಳು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.


ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಬಿಡಬೇಕು. ಇಲ್ಲದಿದ್ದರೆ ಸಿಡಿ ಬಿಡುವುದಾಗಿ ಬೆದರಿಕೆ ಹಾಕಿದ್ದರು. ನಾನು ಯಾರ ಬೆದರಿಕೆಗೂ ಹೆದರುವವನಲ್ಲ. ನನ್ನ ಬೆನ್ನಿಗೆ ನನ್ನ ಕುಟುಂಬ ಹಾಗೂ ಕ್ಷೇತ್ರದ ಜನರಿದ್ದಾರೆ ಎಂದರು.

Join Whatsapp
Exit mobile version