Home ಕರಾವಳಿ ಸ್ತಬ್ಧ ಚಿತ್ರ ನಿರಾಕರಣೆ : ಬಿಲ್ಲವ ಸಂಘದ ಸ್ವಾಭಿಮಾನ ಯಾತ್ರೆಗೆ ಬೆಂಬಲ ಸೂಚಿಸಿದ್ದ ಬಿಜೆಪಿ ನಾಯಕರು...

ಸ್ತಬ್ಧ ಚಿತ್ರ ನಿರಾಕರಣೆ : ಬಿಲ್ಲವ ಸಂಘದ ಸ್ವಾಭಿಮಾನ ಯಾತ್ರೆಗೆ ಬೆಂಬಲ ಸೂಚಿಸಿದ್ದ ಬಿಜೆಪಿ ನಾಯಕರು ನಾಪತ್ತೆ !

ಮಂಗಳೂರು : ಕೇಂದ್ರ ಸರಕಾರ ಗಣರಾಜ್ಯೋತ್ಸವದ ಟ್ಯಾಬ್ಲೋದಿಂದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಸಂಘ ಹಮ್ಮಿಕೊಂಡಿದ್ದ ಸ್ವಾಭಿಮಾನ ಯಾತ್ರೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸಲಿಲ್ಲ ಎಂದು ವರದಿಯಾಗಿದೆ.

ಯಾವುದೇ ಧ್ವಜ ಇಲ್ಲದೇ ಇದ್ದರೆ ಈ ಸ್ವಾಭಿಮಾನ ಯಾತ್ರೆಗೆ ಬಿಜೆಪಿಯ ಬೆಂಬಲ ಇರಲಿದೆ ಎಂದು ಹೆಚ್ಚಿನ ನಾಯಕರು ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಕೂಡಾ ಈ ಯಾತ್ರೆಗೆ ಬಹಿರಂಗ ಬೆಂಬಲ ಘೋಷಿಸಿತ್ತು ಸಂಘಟಕರು ತೀರ್ಮಾನದಂತೆ ಯಾರೂ ಯಾವುದೇ ಪಕ್ಷದ ಧ್ವಜ ಹಿಡಿಯಬಾರದು ಎಂದು ನಿರ್ದೇಶಿಸಿದ್ದರು. ಇದೀಗ ಬಿಜೆಪಿಯ ನಾಯಕರು ಯಾತ್ರೆಗೆ ಗೈರಾಗಿದ್ದಾರೆ.

ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಸ್ವಾಭಿಮಾನದ ನಡಿಗೆಗೆ  ಗರೋಡಿ ಕ್ಷೇತ್ರದಲ್ಲಿ ಚಾಲನೆ ನೀಡಿದರು. ನಾವು ಪೂಜಾರಿಗೆ ಬೆಂಬಲ ನೀಡುತ್ತೇವೆ ಎಂದ ಬಿಜೆಪಿ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿಲ್ಲ ಎನ್ನಲಾಗಿದೆ. ಸಂಘಪರಿವಾರದ ಒಂದೆರಡು ನಾಯಕರು ಮಾತ್ರ ಈ ಯಾತ್ರೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.  

Join Whatsapp
Exit mobile version