Home ಟಾಪ್ ಸುದ್ದಿಗಳು ಆದಿತ್ಯನಾಥ್ ವಿರುದ್ಧ ನಾನೇ ಸ್ಪರ್ಧಿಸುತ್ತೇನೆ: ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಘೋಷಣೆ

ಆದಿತ್ಯನಾಥ್ ವಿರುದ್ಧ ನಾನೇ ಸ್ಪರ್ಧಿಸುತ್ತೇನೆ: ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಘೋಷಣೆ

►“ಆದಿತ್ಯನಾಥ್ ವಿಧಾನಸಭೆಗೆ ಪ್ರವೇಶಿಸದಂತೆ ತಡೆಯುವುದೇ ಪಕ್ಷದ ಪ್ರಮುಖ ಉದ್ದೇಶ”

ಲಖ್ನೋ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಹೇಳಿದ್ದಾರೆ.

“ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಥಾನ ಪಡೆಯುವುದು ಮುಖ್ಯವಲ್ಲ. ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಗೆ ಆಯ್ಕೆಯಾಗದೇ ಇರುವುದು ಮುಖ್ಯ. ಹಾಗಾಗಿ ಯೋಗಿ ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ನಾನು ಕೂಡ ಸ್ಪರ್ಧಿಸುತ್ತೇನೆ” ಎಂದು ಆಝಾದ್ ಹೇಳಿದ್ದಾರೆ.

ನಮಗೆ ಇನ್ನೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾದರೆ ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗದವರನ್ನು ಹೆಚ್ಚು ಅಭ್ಯರ್ಥಿಗಳಾಗಿ ಪರಿಗಣಿಸುತ್ತೇವೆ ಎಂದು ಆಝಾದ್ ಹೇಳಿದರು.
ಈ ನಡುವೆ ಕೆಲವು ಬಿಜೆಪಿ ವಲಯಗಳು ಮತ್ತೆ ಆದಿತ್ಯನಾಥ್ ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಯೋಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Join Whatsapp
Exit mobile version