Home Uncategorized ಬೆಳ್ತಂಗಡಿಯಲ್ಲಿ ಆನೆ ದಾಳಿ: ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ 60 ಸಾವಿರ ರೂ. ಪರಿಹಾರ

ಬೆಳ್ತಂಗಡಿಯಲ್ಲಿ ಆನೆ ದಾಳಿ: ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ 60 ಸಾವಿರ ರೂ. ಪರಿಹಾರ

ಬೆಳ್ತಂಗಡಿ: ನೆರಿಯ ಪೋಸ್ಟ್ ಆಫೀಸ್ ಬಳಿ ಕಳೆದ ನ. 27ರ ರಾತ್ರಿ ಕಾಡಾನೆಯೊಂದು ಆಲ್ಟೋ ಕಾರಿನ ಮೇಲೆ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳಿಗೆ ತಲಾ 60 ಸಾವಿರ ರೂ. ಹಾಗೂ ವಾಹನ ಜಖಂಗೊಂಡಿರುವುದರಿಂದ 20 ಸಾವಿರ ರೂ. ಪರಿಹಾರ ಅರಣ್ಯ ಇಲಾಖೆಯಿಂದ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಘಟನೆಯಲ್ಲಿ ಗಾಯಗೊಂಡವರ ಅರ್ಜಿ ಪಡೆದು ಪರಿಹಾರಕ್ಕಾಗಿ ಅರಣ್ಯ ಇಲಾಖೆ ಆನ್ಲೈನ್ ನೋಂದಣಿ ಮಾಡಿದೆ. ಇನ್ನು ಕಾರಿನ ಮೇಲೆ ಆನೆ ದಾಳಿ ನಡೆಸಿದ ಘಟನೆಯ ಬಳಿಕ ಆನೆಯು ಮಿಯಾರು ಅರಣ್ಯವಾಗಿ ಅರಸಿನಮಕ್ಕಿ, ಶಿಶಿಲದಿಂದ ಶಿರಾಡಿ ಘಾಟಿ ಅರಣ್ಯ ಪ್ರದೇಶದತ್ತ ಸಂಚರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Join Whatsapp
Exit mobile version