ತಪ್ಪು ಮಾಡಿಲ್ಲವೆಂದು ನೀನು ಹೇಗೆ ಸಾರ್ವಜನಿಕವಾಗಿ ಹೇಳುತ್ತೀಯ?: ದರ್ಶನ್ ಪರ ವಕೀಲಗೆ ಬಾರ್ ಕೌನ್ಸಿಲ್ ಮಾಜಿ ಉಪಾಧ್ಯಕ್ಷ ತರಾಟೆ

Prasthutha|

ಚಿಕ್ಕಮಗಳೂರು: ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ ಪರವಾಗಿ ವಾದ ಮಾಡುತ್ತಿರುವ ಲಾಯರ್ ಆಗಿರಲು ಅನ್‌ಫಿಟ್ ಎಂದು ಬಾರ್ ಕೌನ್ಸಿಲ್ ಮಾಜಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ. ವಕೀಲ ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲವೆಂದು 100 ಸಲ ಹೇಳ್ತಾನೆ. ಆದರೆ, ಕಕ್ಷಿದಾರ ನಿರಪರಾಧಿ ಎಂದು ಕೋರ್ಟ್‌ನಲ್ಲಿ ಹೇಳಬೇಕು ಹೊರತು ಸಾರ್ವಜನಿಕವಾಗಿ ಅಲ್ಲ ಎಂದಿದ್ದಾರೆ.

- Advertisement -

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನ ಕಕ್ಷಿದಾರರನ್ನ ಕೋರ್ಟಿನಲ್ಲಿ ಡಿಫೆಂಡ್ ಮಾಡ್ಕೋ. ಪಬ್ಲಿಕ್‌ನಲ್ಲಿ ಅಲ್ಲ. ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ಮಾತನಾಡುವಾಗ ಅವರು ಅಪರಾಧ ಮಾಡಿಲ್ಲ ಅಂತ 100 ಸಲ ಹೇಳ್ತಾನೆ. ಆತ ಲಾಯರ್ ಆಗಲು ಅನ್ ಫಿಟ್. ಬಾರ್ ಕೌನ್ಸಿಲ್‌ನಿಂದ ಅವನಿಗೆ ನೋಟೀಸ್ ಕೊಡುಸ್ತೀನಿ ಎಂದಿದ್ದಾರೆ.

ದರ್ಶನ್ ಅವರು ತಪ್ಪು ಮಾಡಿಲ್ಲ, ಪೊಲೀಸರ ತನಿಖೆ ಸರಿ‌ ಇಲ್ಲ ಅಂತ ಲಾಯರ್ ಆದವರು ಬೀದಿಯಲ್ಲಿ ಹೇಳ್ತಾರಾ ಎಂದು ಕೇಳಿದ್ದಾರೆ.

- Advertisement -

ನಿನ್ನ ಕೆಲಸ ಕೋರ್ಟ್ ಒಳಗೆ ಇರಬೇಕೇ ಹೊರತು, ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ನಿನ್ನ ಕಕ್ಷಿದಾರನ ಡಿಫೆಂಡ್ ಮಾಡು, ಎಲ್ಲರೂ ಅದಕ್ಕೆನೇ ಕರೀ ಕೋಟು ಹಾಕಿರೋದು. ಗಾಂಧೀಜಿನ್ನು ಕೊಂದ ನಾಥೂರಾಮ್ ಗೋಡ್ಸೆಗೆ ಹಾಗೂ ಇಂದಿರಾಗಾಂಧಿ, ರಾಜೀವ್ ಗಾಂಧಿ ಕೊಂದವರಿಗೂ ಲಾಯರಿದ್ದರು. ಅವರು ಯಾರೂ ಕೂಡ ತಮ್ಮ ಕಕ್ಷಿದಾರರು ತಪ್ಪು ಮಾಡಿಲ್ಲ ಅಂತ ಸಾರ್ವಜನಿಕವಾಗಿ ಹೇಳಿಲ್ಲ. ಆದರೆ ನೀನು ಹೇಗೆ ಸಾರ್ವಜನಿಕವಾಗಿ ತಪ್ಪು ಮಾಡಿಲ್ಲವೆಂದು ಹೇಳುತ್ತೀಯ ಎಂದು ಕಿಡಿಗಾರಿದ್ದಾರೆ.

Join Whatsapp
Exit mobile version