Home ಟಾಪ್ ಸುದ್ದಿಗಳು ಬಜರಂಗದಳ ಮಾರಾಮಾರಿ : ಸಂ‍ಚಾಲಕನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಕಾರ್ಯಕರ್ತರು

ಬಜರಂಗದಳ ಮಾರಾಮಾರಿ : ಸಂ‍ಚಾಲಕನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಕಾರ್ಯಕರ್ತರು

ವಿಟ್ಲ: ಬಜಂಗದಳ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಎಂಬವರ ಮೇಲೆ ಸಾಲೆತ್ತೂರು-ಅಗರಿಯಲ್ಲಿ ಬಜರಂಗದಳದ ಕಾರ್ಯಕರ್ತರು ಹಲ್ಲೆ ಮಾಡಿದ್ದು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.

ಕಾರ್ಯಕರ್ತರ ಒಂದು ತಂಡವು ಜೂನ್ 19 ರ ಸಂಜೆ ತನಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ‘ ನೀನು ಸಂಘಟನೆಯಲ್ಲಿ ಭಾರೀ ಹಾರಾಡ್ತೀಯಾ, ನಿನ್ನನ್ನು ಕೊಲೆ ಮಾಡದೆ ಬಿಡಲ್ಲ’ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಜರಂಗದಳ ಸಂಚಾಲಕ ಚಂದ್ರಹಾಸ್ ದೂರು ನೀಡಿದ್ದಾರೆ.

ಸಂಘಟನೆಯ ಕಾರ್ಯಕರ್ತರ ನಡುವಿನ ವೈಮನಸ್ಸು ಹೋಗಲಾಡಿಸಲು ಸಾಲೆತ್ತೂರಿನ ಮನೆಯೊಂದರಲ್ಲಿ ಮಾತಾಡುತ್ತಿದ್ದ ಚಂದ್ರಹಾಸ್ ಮೇಲೆ ಪ್ರಶಾಂತ್, ತೇಜಸ್ ಮತ್ತಿತರರು ಹಲ್ಲೆ ಮಾಡಿ ಒಟ್ಟು 19 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Join Whatsapp
Exit mobile version