Home ಟಾಪ್ ಸುದ್ದಿಗಳು ಪತ್ರಕರ್ತನ ವಿರುದ್ಧ ಅದಾನಿ ಗ್ರೂಪಿನಿಂದ ಮಾನನಷ್ಟ ಮೊಕದ್ದಮೆ: ಬಂಧನ ವಾರಂಟ್

ಪತ್ರಕರ್ತನ ವಿರುದ್ಧ ಅದಾನಿ ಗ್ರೂಪಿನಿಂದ ಮಾನನಷ್ಟ ಮೊಕದ್ದಮೆ: ಬಂಧನ ವಾರಂಟ್

ನವದೆಹಲಿ: ಪತ್ರಕರ್ತ ರವಿ ನಾಯರ್ ವಿರುದ್ಧ ಅದಾನಿ ಗ್ರೂಪ್ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧನ ವಾರಂಟ್ ಜಾರಿಗೊಳಿಸಿದ್ದಾರೆ.

ರಫೇಲ್ ಡೀಲ್’ ಹಗರಣದ ಬಗ್ಗೆ ಸುದ್ದಿ ಬಿತ್ತರಿಸಿ ಪ್ರಖ್ಯಾತಿ ಹೊಂದಿದ ರವಿ ನಾಯರ್ ಅವರನ್ನು ಗಾಂಧಿನಗರದ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿ ನಾಯರ್ ಅವರು, ಈ ಸಂಬಂಧ ತನಗೆ ಯಾವುದೇ ಸಮನ್ಸ್ ನೀಡಿಲ್ಲ ಅಥವಾ ದೂರಿನ ಯಾವುದೇ ಪ್ರತಿಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಯಾವ ಪೋಸ್ಟ್’ಗೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಪ್ರೇರೇಪಿಸಿದೆ ಎಂದು ನನಗೆ ತಿಳಿಸಲಾಗಿಲ್ಲ ಎಂದು ಅವರು ತಿಳಿಸಿದರು.

Join Whatsapp
Exit mobile version