Home ಟಾಪ್ ಸುದ್ದಿಗಳು ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡದಂತೆ ಮಂಗಳೂರಿನ ಅಗೋಚರ ಶಕ್ತಿಗಳು ತಡೆಯುತ್ತಿದೆಯೇ: ಸಿಎಂಗೆ ಅನ್ವರ್ ಸಾದತ್...

ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡದಂತೆ ಮಂಗಳೂರಿನ ಅಗೋಚರ ಶಕ್ತಿಗಳು ತಡೆಯುತ್ತಿದೆಯೇ: ಸಿಎಂಗೆ ಅನ್ವರ್ ಸಾದತ್ ಪ್ರಶ್ನೆ

ಮಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಜಿಲ್ಲೆಗೆ ಎರಡೆರಡು ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಉದಾರಿತನ ತೋರಿಸಿದ ತಾವುಗಳು, ವಿದ್ಯಾವಂತರ ನಾಡಾದ ಮಂಗಳೂರಿಗರ ಮೇಲೇಕೆ ನಿಮ್ಮ ಮಲತಾಯಿ ಧೋರಣೆ ಏಕೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಪ್ರಶ್ನಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಲೇಜು ಮಂಜೂರು ಮಾಡದಂತೆ ನಿಮ್ಮನ್ನು ಮಂಗಳೂರಿನ ಯಾವುದಾದರು ಅಗೋಚರ ಶಕ್ತಿಗಳು ತಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.


ಸರಕಾರಿ ಮೆಡಿಕಲ್ ಕಾಲೇಜಿಗಾಗಿ ದ.ಕ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿರುವ ಜನಾಂದೋಲನ ಅತೀ ಶೀಘ್ರದಲ್ಲೇ ಬೀದಿ ಹೋರಾಟವಾಗಿ ಮಾರ್ಪಾಡಾಗಲಿದೆ. ಮುಂದಕ್ಕೆ ಈ ಜನಾಂದೋಲನ ಜನಾಕ್ರೋಶವಾಗಿ ಪರಿವರ್ತನೆಯಾಗಿ ಸರ್ಕಾರದ ವಿರುದ್ಧ ಜನರು ಸೆಟೆದು ನಿಂತು ನಿಮ್ಮ ಗದ್ದುಗೆಯನ್ನೇ ಅಲುಗಾಡಿಸುವ ಮೊದಲು ದ.ಕ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜ್ ನ ಬೇಡಿಕೆಯನ್ನು ಈಡೇರಿಸಿ ಎಂದು ಹೇಳಿದ್ದಾರೆ.

Join Whatsapp
Exit mobile version